ಭದ್ರತೆ ಒದಗಿಸಲು ಇಸ್ಮಾಯೀಲ್ ಶಾಫಿ ಮನವಿ
Update: 2017-10-09 18:30 GMT
ಮಂಗಳೂರು, ಅ. 9: ವಾಟ್ಸ್ಸ್ಆ್ಯಪ್ನಲ್ಲಿನ ನನ್ನ ಧ್ವನಿ ಸಂದೇಶವನ್ನು ವಿಕೃತಗೊಳಿಸಿ ಜಿಲ್ಲೆಯ ಶಾಂತಿಯನ್ನು ಕೆಡಿಸಲೆತ್ನಿಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮತ್ತು ಜೀವ ಭಯದಿಂದ ತತ್ತರಿಸಿರುವ ನನ್ನ ಮತ್ತು ನನ್ನ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಇಸ್ಮಾಯೀಲ್ ಶಾಫಿ ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.