ಟೆಕ್ನೋ ಸಪ್ತಾಹ ಸಮಾರೋಪದಲ್ಲಿ ಎಂ.ಎಚ್. ಶರೀಫ್‌ರಿಗೆ ಸನ್ಮಾನ

Update: 2017-10-11 12:06 GMT

ಮಂಗಳೂರು, ಅ.11: ಅಸೋಸಿಯೇಶನ್ ಆಫ್ ಕನ್‌ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಎಸಿಸಿಇ (ಐ) ಮತ್ತು ರಾಮ್ಕೋ ಸಿಮೆಂಟ್ಸ್ ಲಿಮೆಟೆಡ್ ವತಿಯಿಂದ ಆಯೋಜಿಸಲಾದ ಟೆಕ್ನೋ ಸಪ್ತಾಹ 2017ರ ಸಮಾರೋಪ ಸಮಾರಂಭದಲ್ಲಿ ನಗರದ ಕ್ರಿಯೇಟಿವ್ ಇಂಜಿನಿಯರ್ಸ್‌ನ ಆಡಳಿತ ಪಾಲುದಾರರಾದ ಎಂ.ಎಚ್. ಶರೀಫ್‌ರನ್ನು ಸನ್ಮಾನಿಸಲಾಯಿತು.

ನಗರದ ಬೆಂದೂರ್‌ನ ಸಂತ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಸಭಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಈ ಸನ್ಮಾನ ಕಾರ್ಯ ನಡೆಯಿತು.

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ಸರಕಾರಿ ಆಸ್ಪತ್ರೆ ಲೇಡಿಗೋಶನ್‌ನ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಇಂಜಿನಿಯರ್ ಆಗಿರುವ ಎಂ.ಎಚ್. ಶರೀಫ್‌ರವರು ತೋರಿದ ಕಾಳಜಿಯನ್ನು ಪರಿಗಣಿಸಿ ಸನ್ಮಾನಿಸಲಾಯಿು. ಕಾರ್ಯಕ್ರಮವನ್ನು ಎಂಐಟಿ ಮಣಿಪಾಲ್‌ನ ನಿರ್ದೇಶಕ ಮತ್ತು ಮಣಿಪಾಲ ವಿವಿಯ ಉಪ ಕುಲಪತಿ ಡಾ. ಜಿ.ಕೆ. ಪ್ರಭು ಉದ್ಘಾಟಿಸಿದರು.

ಈ ಸಂದರ್ಭ ರ್ಯಾಮ್ಕೋ ಲಿಮಿಟೆಡ್‌ನ ಡಿಜಿಎಂ (ಟೆಕ್ನಿಕಲ್) ಅನಿಲ್ ಪಿಲ್ಲೈ, ಎಸಿಸಿಇ(ಐ)ನ ರಾಷ್ಟ್ರೀಯ ಉಪಾಧ್ಯಕ್ಷ ಇಜಯ ವಿಷ್ಣು ಮಯ್ಯ, ಅನಿಲ್ ಎಸ್. ಡಿಸೋಜಾ, ಸತ್ಯರಂಜನ್ ರಾವ್, ಅರುಣ್ ಪ್ರಭಾ, ಸೂರಜ್ ಶೆಟ್ಟಿ, ವಿನಾಯಕ್ ಪೈ, ಆಸ್ಟಿನ್ ಮಿರಾಂಡ ಮತ್ತು ರಾಜೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News