ಉಪ್ಪೂರು: ಕೆಸರು ಗದ್ದೆ ಕ್ರೀಡಾಕೂಟ

Update: 2017-10-11 15:14 GMT

ಬ್ರಹ್ಮಾವರ, ಅ.11: ಉಡುಪಿ ತಾಲೂಕು ರಾಮ ಕ್ಷತ್ರೀಯ ಯುವ ಸಂಘದ ವತಿಯಿಂದ ಕೆಸರು ಗದ್ದೆ ಕ್ರೀಡಾಕೂಟವನ್ನು ಉಪ್ಪೂರು ಬಸ್ ನಿಲ್ದಾಣದ ಬಳಿಯ ಗ್ದೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ಬಹುಮಾನ ವಿತರಿಸಿದರು. ಸಂಘದ ಮಾಜಿ ಅಧ್ಯಕ್ಷ ಕರುಣಾಕರ ರಾವ್, ರಾಮರಾಜ ಕ್ಷತ್ರಿಯ ಯುವ ಸಂಘ ಮುಂಬೈಯ ಜೊತೆ ಕಾರ್ಯದರ್ಶಿ ನಿತ್ಯಾನಂದ ರಾವ್ ಗುರ್ಮೆ, ಯಶವಂತ್, ಬಾಲ ಗಂಗಾಧರ ರಾವ್, ಮಂಜುಳಾ ಜಯಕ ಮೊದಲಾದವರು ಉಪಸ್ಥಿತರಿದ್ದರು.
  ಈ ಕ್ರೀಡಾಕೂಟದಲ್ಲಿ ಸಾಸ್ತಾನ, ನೀಲಾವರ, ಕಾಪು, ಸಾಂತ್ಯಾರು ಘಟಕದ ಮಹಿಳೆಯರೂ ಸೇರಿದಂತೆ ಹಲವು ಕ್ರೀಡಾಪಟುಗಳು ಭಾಗವಹಿಸಿದ್ದರು. ಹಗ್ಗ ಜಗ್ಗಾಟ, ಮಾನವ ಪಿರಾಮಿಡ್, ಮೂರು ಕಾಲು ಓಟ ಇನ್ನಿತರ ಸ್ಪರ್ಧೆಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News