ಗಾಂಜಾ ನೀಡಿದ ಪ್ರಕರಣ: ಆರೋಪಿ ಸೆರೆ
Update: 2017-10-11 15:23 GMT
ಮಂಜೇಶ್ವರ, ಅ. 11: ಉಪ್ಪಿನ ಕಾಯಿಯೆಂದು ಹೇಳಿ ಕೊಲ್ಲಿ ರಾಷ್ಟ್ರಕ್ಕೆ ತೆರಳುವಾತನಲ್ಲಿ ಗಾಂಜಾ ಹೊಂದಿದ ಕಟ್ಟೊಂದನ್ನು ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೊಡಿಯಮ್ಮ ನಿವಾಸಿ ಸೂಪಿ (37) ಎಂದು ಗುರುತಿಸಲಾಗಿದೆ. ಕೊಡಿಯಮ್ಮ ಛತ್ರಪ್ಪಳ್ಳದ ಬಶೀರ್ ಎಂಬವರ ಕೈಯ್ಯಲ್ಲಿ ಕೊಲ್ಲಿಗೆ ತೆರಳುವ ವೇಳೆ ಉಪ್ಪಿನಕಾಯಿಯೆಂದು ಸುಳ್ಳು ಹೇಳಿ ಕಟ್ಟೊಂದನ್ನು ನೀಡಲಾಗಿತ್ತು. ಈ ಬಗ್ಗೆ ಮಾಹಿತಿ ಅರಿಯದ ಬಶೀರ್ ದೋಹಾದ ವಿಮಾನ ನಿಲ್ದಾನದಲ್ಲಿ ತಪಾಸಣೆ ವೇಳೆ ಗಾಂಜಾ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧನಕೊಳ್ಳಗಾದ ಬಶೀರ್ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಇದರಂತೆ ಬಶೀರ್ ಮನೆಯವರು ಸೂಪಿ ವಿರುದ್ಧ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸೂಪಿಯನ್ನು ಬಂಧಿಸಿದ್ದಾರೆ.