ವಿದ್ಯಾರ್ಥಿನಿ ನಾಪತ್ತೆ
Update: 2017-10-11 16:01 GMT
ಪುತ್ತೂರು, ಅ. 11: ಪುತ್ತೂರಿನ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಯಾದಗಿರಿ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ಇಲ್ಲಿನ ವಸತಿ ನಿಲಯದಿಂದ ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.
ಮೂಲತಃ ಯಾದಗಿರಿ ಜಿಲ್ಲೆಯ ಶಾಹಪುರವಾಲು ಹತ್ತಿ ಗೂಡೂರು ನಿವಾಸಿ ಮಲ್ಲಪ್ಪ ಮತ್ತು ಮಲಕಣ್ಣ ದಂಪತಿ ಪುತ್ರಿ, ಪುತ್ತೂರಿನ ಕಾಲೇಜೊಂದರಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿರುವ ಸುರೇಖಾ (17) ನಾಪತ್ತೆಯಾದ ವಿದ್ಯಾರ್ಥಿನಿ.
ಪುತ್ತೂರಿನ ನೆಲ್ಲಿಕಟ್ಟೆ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯದಲ್ಲಿ ಉಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದು ಸುರೇಖಾ ಅ.9ರಂದು ಬೆಳಿಗ್ಗೆ ವಸತಿ ನಿಲಯದಿಂದ ಕಾಲೇಜಿಗೆಂದು ಹೊರಟು ಹೋದವಳು ನಾಪತ್ತೆಯಾಗಿದ್ದು, ಈ ಕುರಿತು ಆಕೆಯ ತಾಯಿ ದೂರು ನೀಡಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.