ಎಸ್‌ವೈಎಸ್ ಪಾಣೆಮಂಗಳೂರು ಘಟಕ: ನೂತನ ಪದಾಧಿಕಾರಗಳ ಆಯ್ಕೆ

Update: 2017-10-12 09:23 GMT

ಬಂಟ್ವಾಳ, ಅ. 12: ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ (ಎಸ್‌ವೈಎಸ್) ಪಾಣೆಮಂಗಳೂರು ಘಟಕದ ವಾರ್ಷಿಕ ಮಹಾ ಸಭೆಯು ತಾಲೂಕಿನ ಆಲಡ್ಕ ಮದ್ರಸ ಸಭಾಂಗಣದಲ್ಲಿ ನಡೆಯಿತು. ಖಾಸಿಂ ಮದನಿ ಬೊಳ್ಳಾಯಿ  ದುಆ ನೆರವೇರಿಸುವ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಪಿಐಬಿ ಅಬ್ದುಲ್ ಹಮೀದ್ ಆಲಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಬ್ದುಸ್ಸಲಾಂ ಸಅದಿ ಬೊಗೋಡಿ, ಯೂಸುಫ್ ಮದನಿ ಬೊಳ್ಳಾಯಿ, ಮುಹಮ್ಮದ್ ಮದನಿ ಉಪಸ್ಥಿತರಿದ್ದರು. ಕೆ.ಪಿ.ಅಬ್ದುಲ್ಲಾ ಕೊಳಕೆ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಪಿ.ಮುಹಮ್ಮದ್ ರಫೀಕ್ ಆಲಡ್ಕ, ಉಪಾಧ್ಯಕ್ಷರಾಗಿ ಎನ್.ಎ. ಅಬ್ದುಲ್ ರಹಿಮಾನ್ ಮದನಿ ಕಾರಜೆ, ಸಿ.ಎಚ್. ಖಾಸಿಂ ಮದನಿ ಬೊಳ್ಳಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ.ಅಬ್ದುಲ್ಲ ಕೊಳಕೆ, ಜೊತೆ ಕಾರ್ಯದರ್ಶಿಯಾಗಿ ಎನ್. ಕರೀಂ ಬೊಳ್ಳಾಯಿ, ಫಾರೂಕ್ ಕಾರಾಜೆ, ಕೋಶಾಧಿಕಾರಿಯಾಗಿ ಪಿ.ಐ.ಬಿ. ಅಬ್ದುಲ್ ಹಮೀದ್ ಆಲಡ್ಕ ಹಾಗೂ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News