ಕಾರಿನ ಜಾನುವಾರು ಸಾಗಾಟ: ಓರ್ವನ ಸೆರೆ
Update: 2017-10-12 17:17 GMT
ಹಿರಿಯಡ್ಕ, ಅ.12: ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಓರ್ವನನ್ನು ಹಿರಿಯಡ್ಕ ಪೊಲೀಸರು ಅ.12ರಂದು ನಸುಕಿನ ವೇಳೆ ಪೆರ್ಡೂರು ಹಳೆ ಕುಬೇರ ಬಾರ್ ಬಳಿ ಜಂಕ್ಷನ್ನಲ್ಲಿ ಬಂಧಿಸಿದ್ದಾರೆ.
ಅಲಂಗಾರು ರಸ್ತೆ ಕಡೆಯಿಂದ ಪೆರ್ಡೂರು ಕಡೆಗೆ ಹೋಗುತ್ತಿದ್ದ ಕಾರನ್ನು ಪೊಲೀಸರು ತಡೆದು ನಿಲ್ಲಿಸಿದಾಗ ಕಾರಿನಿಂದ ಮೂವರು ಪರಾರಿ ಯಾಗಿದ್ದು, ಚಾಲಕ ಸೀಟಿನಲ್ಲಿದ್ದ ಕಾಪು ಮಲ್ಲಾರಿನ ನಾಜೀಮ್ ಹಾಗೂ ಮೂರು ದನಗಳನ್ನು ಪೊಲೀಸರು ವಶಪಡಿಸಿಕೊಂಡರು.
ಇವರು ಈ ಜಾನುವಾರುಗಳನ್ನು ಹಾಲಾಡಿ ಪೇಟೆಯಿಂದ ಕಳ್ಳತನ ಮಾಡಿ ಕೊಂಡು ಬಂದಿರುವುದಾಗಿ ತಿಳಿಸಿದ್ದು, ದಾಳಿಯ ವೇಳೆ ಅಶ್ರಫ್ ಮಲ್ಲಾರ್, ಇಲಿಯಾಸ್ ಮಲ್ಲಾರ್, ದಾವೂದ್ ಮಲ್ಲಾರ್ ಎಂಬವರು ಕಾರಿನಿಂದ ಇಳಿದು ಓಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.