ಪಡಿತರ ಚೀಟಿದಾರರಿಗೆ ಸೂಚನೆ

Update: 2017-10-13 17:14 GMT

ಉಡುಪಿ, ಅ.13: ಉಡುಪಿ ಜಿಲ್ಲಾಧಿಕಾರಿಯವರ ಜು.14ರ ಅಧಿಕೃತ ಆದೇಶದಂತೆ ಆದರ್ಶ ಗ್ರಾಹಕರ ವಿವಿದ್ದೋದ್ಧೇಶ ಸಹಕಾರಿ ಸಂಘ ನಿಯಮಿತ ಉಡುಪಿ ಇದರ ಪ್ರಾಧಿಕಾರವನ್ನು ರದ್ಧುಪಡಿಸಿದ್ದು, ಈ ನ್ಯಾಯಬೆಲೆ ಅಂಗಡಿಗೆ ಲಗತ್ತಿಸಲಾಗಿರುವ ಪಡಿತರ ಚೀಟಿಗಳನ್ನು ಅಲ್ಲಿಯೇ ಸಮೀಪದ ನಂ.85 ಬನ್ನಂಜೆ ಗ್ರಾಹಕರ ವಿವಿದ್ದೋದ್ದೇಶ ಸರಕಾರಿ ಸಂಘ ಬನ್ನಂಜೆ ಈ ನ್ಯಾಯಬೆಲೆ ಅಂಗಡಿಗಳಿಗೆ ಲಗತ್ತಿಸಲಾಗಿದೆ.

2017ರ ಅಕ್ಟೋಬರ್ ತಿಂಗಳಿನಿಂದ ಅಲ್ಲಿನ ಪಡಿತರ ಚೀಟಿದಾರರು ಬನ್ನಂಜೆ ಗ್ರಾಹಕ ವಿವಿದ್ದೋದ್ದೇಶ ಸಹಕಾರಿ ಸಂಘ ಬನ್ನಂಜೆ ಇಲ್ಲಿ ಪಡಿತರ ಪಡೆಯಬೇಕೆಂದು ಉಡುಪಿ ತಹಶೀಲ್ದಾರರು ತಿಳಿಸಿದ್ದಾರೆ.

ಪಡಿತರ ಚೀಟಿದಾರರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋದಾಗ ಅಂಗವಿಕಲರು, ವಯೋವೃದ್ಧರು ಇರುವಲ್ಲಿ ಮಾತ್ರ ಭಾವಚಿತ್ರ ವಿರುವ ಯಾವುದೇ ಒಬ್ಬ ಕುಟುಂಬ ಸದಸ್ಯರ ಬಯೋ ಮೆಟ್ರಿಕ್ (ಹೆಬ್ಬೆಟ್ಟು) ಪಿಒಎಸ್ ಯಂತ್ರದಲ್ಲಿ ತೆಗೆದುಕೊಳ್ಳದಿದ್ದ ಪಕ್ಷದಲ್ಲಿ ತಾಲೂಕು ಕಚೇರಿಯನ್ನು ಸಂಪರ್ಕಿಸಿದಲ್ಲಿ ಪರಿಶೀಲಿಸಿ ವಿನಾಯಿತಿ ನೀಡಲಾಗುವುದು ಎಂದು ಉಡುಪಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News