ಮೀನುಗಾರಿಕೆಗೆ ಹೋದ ವ್ಯಕ್ತಿ ನಾಪತ್ತೆ

Update: 2017-10-16 17:38 GMT

ಬ್ರಹ್ಮಾವರ, ಅ.16: ಮೀನುಗಾರಿಕೆ ನಡೆಸಲು ದೋಣಿಯಲ್ಲಿ ಹೋದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬಾರಕೂರು ಹೊಸಾಳ ಎಂಬಲ್ಲಿ ನಡೆದಿದೆ.
 ಹೊಸಾಳ ಗ್ರಾಮದ ಭಾಸ್ಕರ ಬಂಗೇರ(39) ನಾಪತ್ತೆಯಾದವರು. ಇವರು ಅ.14ರಂದು ರಾತ್ರಿ 8ಗಂಟೆ ಸುಮಾರಿಗೆ ಬಾರಕೂರಿನ ರಮಾನಂದ ಕರ್ಕೆರ ಎಂಬವರ ದೋಣಿಯನ್ನು ತಗೆದುಕೊಂಡು ಮೀನುಗಾರಿಕೆ ಹೋದವರು ನಾಪತ್ತೆಯಾಗಿದ್ದು, ಅ.15ರಂದು ಬೆಳಗ್ಗೆ ದೋಣಿಯು ಬೆಣ್ಣೆಕುದ್ರು ಕುಲಮಾಸ್ತಿ ಅಮ್ಮ ದೇವಸ್ಥಾನದ ಎದುರು ನದಿ ತೀರದಲ್ಲಿ ಪತ್ತೆಯಾಗಿದೆ.

ಭಾಸ್ಕರ ಬಂಗೇರ ನೀರಿನಲ್ಲಿ ಬಿದ್ದು ನಾಪತ್ತೆಯಾಗಿರಬಹುದು ಅಥವಾ ದೋಣಿಯಿಂದ ಮೇಲೆ ಹತ್ತಿ ಹೋಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News