ಇಸ್ಪೀಟ್ ಜುಗಾರಿ: ಎಂಟು ಮಂದಿ ಸೆರೆ

Update: 2017-10-16 17:40 GMT

ಕಾರ್ಕಳ, ಅ.16: ಕೆದಿಂಜೆ ಗ್ರಾಮದ ವಿದ್ಯಾಭೋಧಿನಿ ಶಾಲೆಯ ಹಿಂಬದಿ ಯಲ್ಲಿ ಅ.15ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ನಂದಳಿಕೆಯ ಕೃಷ್ಣ(57), ಬೋಳದ ಸುಧಾಕರ(52), ಸಂತೋಷ(30), ಕೆದಿಂಜೆಯ ಭರತ್ (23), ನಿಟ್ಟೆಯ ಸುರೇಶ(46) ಎಂಬವರನ್ನು ಕಾರ್ಕಳ ಪೊಲೀಸರು ಬಂಧಿಸಿ, 2350ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಗುಲ್ವಾಡಿ ಗ್ರಾಮದ ಕುಚ್ಚಟ್ಟು ಎಂಬಲ್ಲಿ ಅ.15ರಂದು ಸಂಜೆ ವೇಳೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಗುಲ್ವಾಡಿಯ ಜಯರಾಮ ದೇವಾಡಿಗ (46), ಕೆಂಚನೂರಿನ ಅರ್ಮ ಮೊಗವೀರ(51), ಕಾವ್ರಾಡಿಯ ಬಾಬು(45) ಎಂಬವರನ್ನು ಬಂಧಿಸಿರುವ ಕುಂದಾಪುರ ಪೊಲೀಸರು 4,490ರೂ. ನಗದು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News