ಸುರತ್ಕಲ್; ಸಫ್ವಾನ್ ಅಪಹರಣ ಪ್ರಕರಣ:ಪೊಲೀಸರಿಂದ ಅಪಹರಣಕಾರರ ಭಾವಚಿತ್ರ ಬಿಡುಗಡೆ

Update: 2017-10-20 15:20 GMT
ಅಪಹರಣಕಾರರು

ಮಂಗಳೂರು, ಅ. 20: ಚೊಕ್ಕಬೆಟ್ಟು ಕಾಟಿಪಳ್ಳ 8ನೆ ಬ್ಲಾಕ್ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ಸಫ್ವಾನ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಅಪಹರಣಕಾರರ ಭಾಚಿತ್ರವನ್ನು ಬಿಡುಗಡೆಗೊಳಿಸಿದ್ದು, ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.

ಅ.5ರಂದು ಸಫ್ವಾನ್‌ರನ್ನು ಸಂಶುದ್ದೀನ್, ಸಫ್ವಾನ್ ಕಿನ್ನಿಗೋಳಿ ಸಹಿತ ಇತರರು ಕಾರಿನಲ್ಲಿ ಅಪಹರಿಸಿದ್ದಾರೆ ಎಂದು ಹಮೀದ್ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಈವರೆಗೂ ಅಪಹರಣಕಾರರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಸಫ್ವಾನ್ ಶೀಘ್ರ ಪತ್ತೆ ಹಚ್ಚುವಂತೆ ಆಗ್ರಹಿಸಿ ಇತ್ತೀಚೆಗೆ ಡಿವೈಎಫ್‌ಐ ವತಿಯಿಂದ ಸುರತ್ಕಲ್ ಜಂಕ್ಷನ್‌ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದೀಗ ಪೊಲೀಸರು ಅಪಹರಣಕಾರರ ಪತ್ತೆಗೆ ಸಾರ್ವಜನಿಕರ ಸಹಾಯವನ್ನು ಯಾಚಿಸಿದ್ದಾರೆ.

(ಸಫ್ವಾನ್‌)

ಅಪಹರಣಕಾರರೆನ್ನಲಾದ ಸಂಶುದ್ದೀನ್ ಮುಕ್ಕ, ಸಫ್ವಾನ್ ಹುಸೈನ್, ಫೈಜಲ್ ಯಾನೆ ಟೊಪ್ಪಿ ಫೈಜಲ್, ಶಾಹಿಲ್ ಮತ್ತು ಸುಫಿಯಾನ್ ಎಂಬವರ ಭಾವಚಿತ್ರಗಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಅಪಹರಣಕಾರರು ಉಪಯೋಗಿಸಿದ ಕಾರಿನ ಚಿತ್ರ ಹಾಗೂ ಸಂಖ್ಯೆ ಕೆಎ 20 ಎಂಎ 2844ಯನ್ನು ಬಿಡುಗಡೆಗೊಳಿಸಿದ್ದಾರೆ.

 ಭಾವಚಿತ್ರದಲ್ಲಿರುವ ವ್ಯಕ್ತಿಗಳು ಹಾಗೂ ವಾಹನ ಕಂಡುಬಂದಲ್ಲಿ ಉಪ ಪೊಲೀಸ್ ಆಯುಕ್ತರ ಮೊಬೈಲ್ ಸಂಖ್ಯೆ 9480802304 (ಕಾನೂನು ಮತ್ತು ಸುವ್ಯವ್ಯಸ್ಥೆ), 9480802305 (ಅಪರಾಧ ಮತ್ತು ಸಂಚಾರ), ಸಹಾಯಕ ಪೊಲೀಸ್ ಆಯುಕ್ತ 9480805322 (ಮಂಗಳೂರು ಉತ್ತರ ಉಪವಿಭಾಗ-ಪಣಂಬೂರು), ಪೊಲೀಸ್ ನಿರೀಕ್ಷಕರು-ಸುರತ್ಕಲ್ ಪೊಲೀಸ್ ಠಾಣೆ 9480805360 ಅಥವಾ 0824-2220540, ನಗರ ನಿಯಂತ್ರಣ ಕೊಠಡಿ-ಮಂಗಳೂರು ನಗರ 0824-2220800 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News