ಸುರತ್ಕಲ್ ಮಾರುಕಟ್ಟೆ ಅವ್ಯವಸ್ಥೆ : ಡಿವೈಎಫ್ಐ ನಿಯೋಗ ಪರಿಶೀಲನೆ
Update: 2017-10-21 16:35 GMT
ಮಂಗಳೂರು, ಅ.21: ಸುರತ್ಕಲ್ ಮಾರುಕಟ್ಟೆಯ ಅವ್ಯವಸ್ಥೆ ಹಾಗೂ ಅತಂತ್ರ ವ್ಯಾಪಾರಿಗಳ ಅಳಲಿನ ಹಿನ್ನಲೆಯಲ್ಲಿ ಡಿವೈಎಫ್ಐ ನಿಯೋಗ ಶನಿವಾರ ಸುರತ್ಕಲ್ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸುರತ್ಕಲ್ ಮಾರುಕಟ್ಟೆಗೆ ಸಂಬಂಧಿಸಿ ವ್ಯಾಪಾರಸ್ಥರು, ಸಾರ್ವಜನಿಕರನ್ನು ಕತ್ತಲಲ್ಲಿಟ್ಟುಕೊಂಡು ಶಾಸಕರು ಹೈಟೆಕ್ ಮಾರುಕಟ್ಟೆ ನಿರ್ಮಿಸಲು ಹೊರಟಿದ್ದಾರೆ. ನಿಯಮಗಳನ್ನು ಉಲ್ಲಂಘಿಸಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸಿದ್ದಾರೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡರು.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾರದರ್ಶಕವಾಗಿ ನಿಯಮಾನುಸಾರ ಮಾರುಕಟ್ಟೆ ವಿಚಾರವನ್ನು ನಿರ್ವಹಿಸಬೇಕಿದೆ. ಇಲ್ಲದಿದ್ದಲ್ಲಿ ಹೋರಾಟ ಮಾಡುವುದಾಗಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದರು.