ಅ.24ರಂದು ಶಂಸುಲ್ ಉಲಮಾ ಪಬ್ಲಿಕೇಶನ್‌ನಿಂದ ಪುಸ್ತಕ ಬಿಡುಗಡೆ

Update: 2017-10-23 14:53 GMT

ಮಂಗಳೂರು, ಅ. 23: ನಗರದ ಸ್ಟೇಟ್‌ಬ್ಯಾಂಕ್ ಬಳಿ ಪೊಯ್ನೀರ್ ಕಾಂಪ್ಲೆಕ್ಸ್‌ನಲ್ಲಿ ಎಂ.ಆರ್. ಬುಕ್‌ಸ್ಟಾಲ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಶಂಸುಲ್ ಉಲಮಾ ಪಬ್ಲಿಕೇಶನ್ ಇದರ ವತಿಯಿಂದ ಮೀಲಾದ್ ಪ್ರಯುಕ್ತ ಹೊರತಂದ ಮನಾಖಿಬುರ್ರಸೂಲ್ ಭಾಷಣ ಪುಸ್ತಕ, ಶಂಸುಲ್ ಉಲಮಾ ಮೌಲೀದ್ ಕಿತಾಬ್, ಎಸ್‌ಕೆಎಸ್‌ಎಸ್‌ಎಫ್ ಹಾಗೂ ಎಸ್‌ಕೆಎಸ್‌ಬಿವಿ ಪೆನ್ನು ಅ.24ರಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆಗೊಳ್ಳಲಿದೆ.

ಸಮಾರಂಭದಲ್ಲಿ ಮಾಜಿ ಮೇಯರ್ ಕೆ. ಅಶ್ರಫ್, ಝೀನತ್ ಭಕ್ಷ್ ಮಸೀದಿಯ ಕೋಶಾಧಿಕಾರಿ ಬಾಷಾ ತಂಙಳ್, ಸಿತಾರ್ ಮಜೀದ್ ಹಾಜಿ, ನೌಷಾದ್ ಹಾಜಿ ಸೂರಲ್ಪಾಡಿ, ಐ. ಮೊಯ್ದಿನಬ್ಬ ಹಾಜಿ, ಕೆ. ಎಲ್. ಉಮರ್ ದಾರಿಮಿ, ಇಬ್ರಾಹೀಂ ದಾರಿಮಿ ಕಡಬ, ಲತೀಫ್ ದಾರಿಮಿ ರೆಂಜಾಡಿ, ಹಮೀದ್ ಕಣ್ಣೂರು, ಮೆಟ್ರೋ ಶಾಹುಲ್ ಹಮೀದ್ ಹಾಜಿ, ರಿಯಾಝ್ ಹಾಜಿ, ಅಬ್ದುಲ್ಲ ಬೆಳ್ಮ, ಹಸನ್ ಬೆಂಗರೆ, ಮುಂತಾದವರು ಭಾಗವಹಿಸಲಿದ್ದಾರೆ ಎಂದು ಮುಸ್ತಫ ಫೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News