ಪಡುಬಿದ್ರೆ: ಮಾದಕ ಜಾಲದ ವಿರುದ್ಧ ಕ್ರಮಕ್ಕೆ ಒತ್ತಾಯ

Update: 2017-10-24 12:22 GMT

ಪಡುಬಿದ್ರೆ, ಅ. 24: ಇತ್ತೀಚಿನ ದಿನಗಳ್ಲಲಿ ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದ.ಕ. ಜಿಲ್ಲೆಗಳಲ್ಲಿ ಗಾಂಜಾ ವ್ಯಾಪಾರ ಹಾಗೂ ಇತರ ಮಾದಕ ದ್ರವ್ಯಗಳ ಸರಬರಾಜು ದಿನೇ ದಿನೇ ಹೆಚ್ಚುತ್ತಿದ್ದು ಇದರ ಮೂಲವನ್ನು ಪತ್ತೆ ಹಚ್ಚಿಯುವ, ಯುವ ಸಮೂಹವನ್ನು ರಕ್ಷಿಸಲು ಸರ್ಕಾರ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಂಸುಲ್ ಉಲಮಾ ಆಕಾಡಮಿಯ ಪ್ರಧಾನ ಕಾರ್ಯದರ್ಶಿ ಎಂ.ಪಿ. ಮೊದಿನಬ್ಬ ಒತ್ತಾಯಿಸಿದ್ದಾರೆ.

ಈ ಸಂಬಂಧವಾಗಿ ಅವರು ರಾಜ್ಯ ಗೃಹಸಚಿವರಿಗೆ ಮನವಿಯೊಂದನ್ನು ಸಲ್ಲಿಸಿ ಉಭಯ ಜಿಲ್ಲೆಗಳಲ್ಲಿ ಸಕ್ರಿಯಾಗಿರುವ ಈ ಮಾದಕ ಜಾಲಗಳು ಸಂಪೂರ್ಣ ವಾಗಿ 16-23 ವರ್ಷಗಳ ವಯೋಮಾನದ ಯುವ ಸಮೂಹವನ್ನು ಗುರಿಯಾಗಿರಿಸಿಕೊಂಡು ಯುವಕರನ್ನು ಇದರ ದಾಸರನ್ನಾಗಿ ಮಾಡುತ್ತಿವೆ. ಇದರ ಹಿಂದೆ ಯುವ ಸಮೂಹವನ್ನು ಮುಂದಿನ ದಿನಗಳಲ್ಲಿ ಸಂಪೂರ್ಣ ನಾಶ ಪಡಿಸುವ ಹುನ್ನಾರ ಅಡಗಿದೆ. ಸರ್ಕಾರವು ಈ ವಿಚಾರದಲ್ಲಿ ಗಂಭೀರ ಕ್ರಮ ಕೈಗೊಳ್ಳದೇ ಉದಾಸೀನತೆ ತೋರಿದಲ್ಲಿ ಮುಂದಿನ ದಿನಗಳಲ್ಲಿ ಉಭಯ ಜಿಲ್ಲೆಗಳ ಯುವ ಸಮೂಹವು ಸಂಪೂರ್ಣವಾಗಿ ಮಾದಕ ದ್ರವ್ಯಗಳ ವ್ಯಸನಿಗಳಾಗಿ ಜಿಲ್ಲೆಯು ಅರಾಜಕತೆಯತ್ತ ಸಾಗಲಿದೆ ಎಂದು ಅವರು ತಿಳಿಸಿದ್ದು ಜಿಲ್ಲೆಯ ಯುವಕರು, ವಿದ್ಯಾರ್ಥಿ ಸಮೂಹವನ್ನು ಈ ದಂಧೆಕೋರರಿಂದ ರಕ್ಷಿಸಿ ಎಂದು ಕಳಕಳಿಯ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News