ಉಡುಪಿ ಯಕ್ಷಗಾನ ಕಲಾರಂಗದಿಂದ ಕೆ.ಶ್ರೀಧರ ರಾವ್ ಕುಟುಂಬಕ್ಕೆ ಗೌರವ
Update: 2017-10-24 14:30 GMT
ಉಡುಪಿ, ಅ.24: ಇತ್ತೀಚೆಗೆ ನಿಧನರಾದ ತೆಂಕುತಿಟ್ಟು ಯಕ್ಷಗಾನದ ಹಿರಿಯ ಭಾಗವತ ಕುಬಣೂರು ಶ್ರೀಧರ ರಾವ್ ಕುಟುಂಬಕ್ಕೆ ಯಕ್ಷನಿಧಿಯ ಗೌರವವನ್ನು ಉಡುಪಿ ಯಕ್ಷಗಾನ ಕಲಾರಂಗದ ಸದಸ್ಯರು ಬೆಳ್ತಂಗಡಿಯ ಅವರ ಮನೆಗೆ ತೆರಳಿ ಸಲ್ಲಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಪಿ.ಕಿಶನ್ ಹೆಗ್ಡೆ ಅವರು ಶಾರದಾ ಶ್ರೀಧರ್ ರಾವ್ ಅವರಿಗೆ ಫಲವಸ್ತು, ಶಾಲು, ಯಕ್ಷನಿಧಿ ವತಿಯಿಂದ 20,000ರೂ. ನಗದು ಸಮರ್ಪಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಭಾಗವತರ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಪ್ರೊ. ನಾರಾಯಣ್ ಎಂ ಹೆಗಡೆ, ಮನೋಹರ್ ಕೆ, ವಿದ್ಯಾ ಪ್ರಸಾದ್ ಹಾಗೂ ಕುಬಣೂರರ ಪುತ್ರ, ಸೊಸೆ ಉಪಸ್ಥಿತರಿದ್ದರು.