ಆ.28: ಸಿಆರ್‌ಝಡ್ ಅಹವಾಲು ಸ್ವೀಕಾರ

Update: 2017-10-25 16:10 GMT

ಮಂಗಳೂರು, ಅ.25: ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರವು ಕರಾವಳಿ ನಿಯಂತ್ರಣ ವಲಯದ ಅಧಿಸೂಚನೆಯಂತೆ ನ್ಯಾಷನಲ್ ಸೆಂಟರ್ ಫಾರ್ ಸಸ್ಟೆನೇಬಲ್ ಕೋಸ್ಟಲ್ ಮ್ಯಾನೇಹ್‌ಮೆಂಟ್ ನಕ್ಷೆ ತಯಾರಿಸಿದೆ. ಈ ಕರಡು ನಕ್ಷೆಯ ಬಗ್ಗೆ ಅ.28ರಂದು ಪೂರ್ವಾಹ್ನ 11ಕ್ಕೆ ನಗರದ ಪುರಭವನದಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.

 ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ಈ ನಕ್ಷೆ ಕುರಿತು ಆಕ್ಷೇಪಣೆ, ಸಲಹೆ ಮತ್ತು ಅನಿಸಿಕೆಗಳನ್ನು ನೀಡಬಹುದು ಎಂದು ಮಂಗಳೂರು ಪ್ರಾದೇಶಿಕ ನಿರ್ದೇಶಕರ (ಪರಿಸರ) ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News