ವಾಹನದ ಬ್ಯಾಟರಿ ಕಳವು

Update: 2017-10-25 16:30 GMT

ಮಂಗಳೂರು, ಅ.25: ನಗರದ ಅತ್ತಾವರದ ಅಯ್ಯಪ್ಪ ಗುಡಿ ಬಳಿಯ ಮೈದಾನದಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ್ ಮತ್ತು ಜೆಸಿಬಿಯ ಬ್ಯಾಟರಿಯನ್ನು ಕಳವುಗೈದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಷಿತ್ ಎಂಬವರು ಅತ್ತಾವರದಲ್ಲಿ ರಿಯಲ್ ಲ್ಯಾಂಡ್ ಎಂಬ ಕಚೇರಿಯನ್ನು ಹೊಂದಿದ್ದು, ಆ ಮೂಲಕ ಬಾಡಿಗೆಗೆ ಟಿಪ್ಪರ್, ಜೆಸಿಬಿಯನ್ನು ಕೊಡುತ್ತಿದ್ದರು. ಅ.18ರಂದು 4 ಟಿಪ್ಪರ್ ಮತ್ತು 2 ಜೆಸಿಬಿಯನ್ನು ಬಾಡಿಗೆಗೆ ನೀಡಿದ್ದು ಅದರ ಚಾಲಕರು ಕೆಲಸ ಮುಗಿಸಿ ಅತ್ತಾವರದ ಅಯ್ಯಪ್ಪ ಗುಡಿ ಬಳಿಯ ಮೈದಾನದಲ್ಲಿ ನಿಲ್ಲಿಸಿದ್ದರು. ಮರು ದಿನ ಬಂದು ನೋಡಿದಾಗ ಈ ವಾಹನಗಳ ಬ್ಯಾಟರಿ ಕಳವು ಮಾಡಿದ್ದಾರೆ. ಸುಮಾರು 72 ಸಾವಿರ ರೂ. ಮೌಲ್ಯದ ಬ್ಯಾಟರಿ ಕಳವಾಗಿದೆ ಎಂದು ಅಕ್ಷಿತ್ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News