ಹೊಂಡಕ್ಕೆ ಬಿದ್ದ ಲಾರಿ: ಕಾರ್ಮಿಕ ಮೃತ್ಯು
ಕಾಸರಗೋಡು, ಅ. 25: : ಕೊಳವೆ ಬಾವಿ ಕೊರೆಯುವ ಯಂತ್ರ ಹೊಂದಿದ್ದ ಲಾರಿ ರಸ್ತೆ ಬದಿಯ ಹೊಂಡಕ್ಕೆ ಮಗುಚಿ ಬಿದ್ದು ಓರ್ವ ಕಾರ್ಮಿಕ ಮೃತಪಟ್ಟು, ಏಳು ಮಂದಿ ಗಾಯಗೊಂಡ ಘಟನೆ ಬುಧವಾರ ಸಂಜೆ ಪೆರಿಯ ಸಮೀಪದ ಮುನಾಮ್ ಕಡವು ಎಂಬಲ್ಲಿ ನಡೆದಿದೆ.
ಲಾರಿಯಡಿಯಲ್ಲಿ ಸಿಲುಕಿದ್ದ ಕಾರ್ಮಿಕನನ್ನು ಎರಡು ಗಂಟೆಗಳ ಕಾಲ ಅಗ್ನಿಶಾಮಕ ದಳ , ಪೊಲೀಸರು ಮತ್ತು ನಾಗರಿಕರು ಹರಸಾಹಸಪಟ್ಟು ಹೊರತೆಗೆದರೂ ಆಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಮೃತರನ್ನು ಛತ್ತೀಸ್ ಘಡ್ ನ ಬುದ್ದರಾಮ್ (22) ಎಂದು ಗುರುತಿಸಲಾಗಿದೆ. ಛತ್ತೀಸ್ ಘಡ್ ನ ವಿಜಯ್ (20), ಛಾತೂರಾಂ ( 20), ಶುಕರಾಂ (20) , ರಮಣ್ ಸಿಂಗ್ (23) , ಬುದ್ವಾರ್ (23), ತಮಿಳುನಾಡಿನ ಕಾಳಿ ಮುತ್ತು ( 27) ಮತ್ತು ವೇಲು (27) ಗಾಯಗೊಂಡಿದ್ದು , ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ವ್ಯಕ್ತಿಯೋರ್ವರ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯಲು ತೆರಳುತ್ತಿದ್ದಾಗ ಈ ಘಟನೆ ನಡೆ ದಿದೆ.
ಗಾಯಗೊಂಡ ಏಳು ಮಂದಿ ಲಾರಿಯ ಮೇಲೆ ಕುಳಿತಿದ್ದರು. ಇದರಿಂದ ಅಪಘಾತ ಸಂದರ್ಭದಲ್ಲಿ ಇವರು ಎಸೆಯಲ್ಪಟ್ಟಿದ್ದರಿಂದ ಗಾಯಗಳೊಂದಿಗೆ ಪಾರಾಗಿದ್ದಾರೆ.