ಗಾಂಜಾ ಮಾರಾಟ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2017-10-26 17:25 GMT

ಮಂಗಳೂರು, ಅ. 26: ಗಾಂಜಾ ಮಾರಾಟಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಇಕೋನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅಶೋಕ್‌ನಗರದ ತಿಲಕ್ ರಾವ್ ಯಾನೆ ತಿಲ್ಲು ಯಾನೆ ರಾಜ್ (22) ಎಂದು ಗುರುತಿಸಲಾಗಿದೆ.  ಅನೀಸ್ ಎಂಬಾತನಿಗೆ ಗಾಂಜಾ ಮಾರಾಟ ಮಾಡಿದ್ದ ಬಗ್ಗೆ ಈತ ಸೆ. 11ರಂದು ಇಕೋನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಗುರುವಾರ ನಗರದ ಉರ್ವಾ ಮಾರ್ಕೆಟ್ ಬಳಿ ತಿಲಕ್‌ರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News