ಬೆಂಗಳೂರು: ನ.25 ರಂದು ಸಿರಿಧಾನ್ಯ ಶೃಂಗಸಭೆ

Update: 2018-11-24 17:20 GMT

ಬೆಂಗಳೂರು, ನ.24: ಗ್ರಾಮೀಣ ಕುಟುಂಬದ ವತಿಯಿಂದ ನ.25 ರಂದು ಲಾಲ್‌ಬಾಗ್‌ನಲ್ಲಿರುವ ಡಾ.ಮರೀಗೌಡ ಸ್ಮಾರಕ ಭವನದಲ್ಲಿ ಸಿರಿಧಾನ್ಯ ಶೃಂಗಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಸಭೆಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಸಚಿವ ಕೃಷ್ಣಭೈರೇಗೌಡ ಉದ್ಘಾಟಿಸಲಿದ್ದು, ಕೃಷಿ ಸಚಿವ ಶಿವಶಂಕರ ರೆಡ್ಡಿ, ಪರಿಸರ ತಜ್ಞ ಡಾ.ಅ.ನ.ಯಲ್ಲಪ್ಪರೆಡ್ಡಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ಅಂದು ಮಧ್ಯಾಹ್ನ 12.30ಕ್ಕೆ ‘ರೋಗಮುಕ್ತ ಸಿರಿಧಾನ್ಯದ ಹೊಸ ಹುರುಪು ಹೊಳಪು’ ವಿಷಯದ ಕುರಿತು ಸಿರಿಧಾನ್ಯಗಳ ತಜ್ಞ ಡಾ.ಖಾದರ್ ಅವರಿಂದ ಸಂವಾದ ಹಮ್ಮಿಕೊಳ್ಳಲಾಗಿದೆ. ಸಿರಿಧಾನ್ಯ ಬೆಳೆಗಾರರು, ಆಹಾರ ಮತ್ತು ಆರೋಗ್ಯ ತಜ್ಞರು, ಸಿರಿಪಾಕ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಹಲವು ಮಂದಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ಗ್ರಾಮೀಣ ಅಂಗಡಿಯ ಎಂ.ಎಚ್.ಶ್ರೀಧರಮೂರ್ತಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News