ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ವಂಚನೆ ಆರೋಪ: ದೂರು ದಾಖಲು

Update: 2018-12-04 16:57 GMT

ಬೆಂಗಳೂರು, ಡಿ.4: ನಗರದ ಎಂ.ಎಸ್.ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಬಿ. ಕಿಶೋರ್ ಎಂಬುವರಿಂದ 5.19 ಲಕ್ಷ ರೂ. ಪಡೆದು ವಂಚಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ತೇಜಸ್ ಹಾಗೂ ಮಂಜುನಾಥ್ ಎಂಬುವರು ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಕಿಶೋರ್ ದೂರಿದ್ದಾರೆ.

ಕಾಲೇಜುಗಳಿಗಾಗಿ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಪರಿಚಯಸ್ಥರೇ ಆದ ತೇಜಸ್, ಮಂಜುನಾಥ್, ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಸೀಟು ಕೊಡಿಸಲು 5.70 ಲಕ್ಷ ಕೇಳಿದ್ದರು. ಇಬ್ಬರ ಖಾತೆಗೂ ಹಣ ಹಾಕಿದ್ದೆ ಎಂದು ದೂರಿನಲ್ಲಿ ಕಿಶೋರ್ ಹೇಳಿದ್ದಾರೆ. ಹಣ ಪಡೆದ ನಂತರ ಆರೋಪಿಗಳು, ನನಗೆ ಸೀಟು ಕೊಡಿಸಿಲ್ಲ. ಹಣ ವಾಪಸ್ ಕೇಳಿದ್ದಕ್ಕೆ 51 ಸಾವಿರ ಮಾತ್ರ ನೀಡಿದ್ದಾರೆ. ಉಳಿದ ಹಣ ಕೊಡದೇ ವಂಚಿಸಿದ್ದಾರೆ. ಅವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News