ಕರ್ನಾಟಕ ಸರಕಾರ ಅಭಿವೃದ್ಧಿ ರಹಿತ ಭ್ರಷ್ಟಾಚಾರ ಬಯಸಿದೆ: ಪ್ರಧಾನಿ ಮೋದಿ

Update: 2018-12-28 18:30 GMT

ಬೆಂಗಳೂರು,ಡಿ.28: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸರಕಾರ ಅಹಂಕಾರ ಪ್ರದರ್ಶಿಸುತ್ತಿದೆ ಮತ್ತು ಕೇವಲ ಅಭಿವೃದ್ಧಿರಹಿತ ಭ್ರಷ್ಟಾಚಾರದಲ್ಲಿ ಆಸಕ್ತಿ ಹೊಂದಿದೆ ಎಂದು ಆರೋಪಿಸಿದ್ದಾರೆ. ರಾಜ್ಯದ ಮೈತ್ರಿ ಸರಕಾರ ಆಡಳಿತ ಮತ್ತು ವಿರೋಧಾಬಾಸದ ಹೋರಾಟದಲ್ಲಿ ನಿರತವಾಗಿದೆ ಎಂದು ತಿಳಿಸಿರುವ ಪ್ರಧಾನಿ ಮೋದಿ, ಇವರು ಅಧಿಕಾರದಲ್ಲಿರುವುದು ಕೇವಲ ಸಂಗೀತ ಕುರ್ಚಿ ಆಡುವ ಉದ್ದೇಶದಿಂದ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ಸಾಲಮನ್ನಾ ಎನ್ನುವುದು ರಾಜ್ಯ ಸರಕಾರ ರೈತರಿಗೆ ಮಾಡಿರುವ ಕ್ರೂರ ತಮಾಷೆ ಎಂದು ಕಿಡಿಕಾರಿದ್ದಾರೆ. ಕುತಂತ್ರಗಳಿಂದ ಅಧಿಕಾರವನ್ನು ಹಿಡಿದಿರುವವರು ತಮಗೇನೂ ಆಗದು ಎಂದು ತಿಳಿದುಕೊಂಡಿದ್ದಾರೆ. ಆದರೆ ರಾಜ್ಯದ ಜನತೆ ಅವರಿಗೆ ಶೀಘ್ರದಲ್ಲಿ ಪಾಠ ಕಲಿಸಲಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News