ಜ.18ಕ್ಕೆ ಅಂತರ್‌ರಾಷ್ಟ್ರೀಯ ವ್ಯವಹಾರ ಸಮ್ಮೇಳನ

Update: 2019-01-14 16:38 GMT

ಬೆಂಗಳೂರು, ಜ.14: ಕನೆಕ್ಟ್ ಮಿತ್ರ ಬಿಸಿನೆಸ್ ಯೋಗಿ ಹಾಗೂ ಎಸ್‌ಎಂಇ ಕನ್ಸಲ್ಟೆಂಟ್ ವತಿಯಿಂದ ಇದೇ ಮೊದಲ ಬಾರಿಗೆ ಜ.18ರಂದು ಬೆಳಗ್ಗೆ 10 ಗಂಟೆಗೆ ಯಶವಂತಪುರದಲ್ಲಿ ಅಂತರ್‌ರಾಷ್ಟ್ರೀಯ ವ್ಯವಹಾರ ಸಮ್ಮೇಳವನ್ನು ಆಯೋಜಿಸಲಾಗಿದೆ ಎಂದು ಕನೆಕ್ಟ್‌ನ ಅಧ್ಯಕ್ಷ ಸತೀಶ್ ಕೋಟಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತಕ್ಕೂ ಅಧಿಕ ದೇಶಗಳಿಂದ ವಾಣಿಜ್ಯ ಸಂಸ್ಥೆಗಳು, ರಫ್ತುದಾರರು ಅಥವಾ ವ್ಯಾಪಾರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಕರ್ನಾಟಕದ ಉದ್ಯಮಗಳಿಗೆ ಆ ದೇಶಗಳಲ್ಲಿ ಲಭ್ಯವಿರುವ ಅವಕಾಶಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಅಂತರ್‌ರಾಷ್ಟ್ರೀಯ ಗ್ರಾಹಕರೊಂದಿಗೆ ಆಮದು-ರಫ್ತು ಮಾಡಲು ಬಯಸುವ ವ್ಯಾಪಾರ ಮಾಲಕರಿಗೆ ಅನುಕೂಲಕರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಂಗಾಪುರದ ಸಂಸದ ರವೀಂದ್ರ ರಾಮಾಸ್ವಾಮಿ, ಬುಚಾರೆಸ್ಟ್ ಸಿಇಓ ಲುಡ್ವಿಕ್ ಸೊಬೋಲೆಸ್ಕಿ, ದಕ್ಷಿಣ ಭಾರತದ ಎಫ್‌ಐಇಓ ಅಧ್ಯಕ್ಷ ಇಸ್ರಾರ್ ಅಹ್ಮದ್, ಎಂಎಸ್‌ಎಂಇ ಆಯುಕ್ತ ಗುಂಜನ್ ಕೃಷ್ಣ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ನೋಂದಾಯಿಸಿಕೊಳ್ಳಲು ವೆಬ್‌ಸೈಟ್ www.ibsglobal.biz ಅಥವಾ ಮೊಬೈಲ್ ಸಂಖ್ಯೆ: 72040 05399 ಅನ್ನು ಸಂಪರ್ಕಿಸಲು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News