ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ: ಬಿಬಿಎಂಪಿ ಸದಸ್ಯ ಸೇರಿ ಮೂವರ ವಿರುದ್ಧ ದೂರು
Update: 2019-01-16 16:38 GMT
ಬೆಂಗಳೂರು, ಜ.16: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಬಿಎಂಪಿಯ ಎಚ್ಎಎಲ್ ವಾರ್ಡ್ ಸದಸ್ಯ ಸೇರಿದಂತೆ ಮೂವರ ವಿರುದ್ಧ ಇಲ್ಲಿನ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ.
ನಗರದ ಎಚ್ಎಎಲ್ ಬಳಿಯ ಇಸ್ಲಾಂಪುರದ ವೃತ್ತದ ಬಳಿಯಿದ್ದ ಪೊಲೀಸ್ ಚೌಕಿಯನ್ನು ಬಿಬಿಎಂಪಿ ಸದಸ್ಯ ಮಂಜುನಾಥ್, ಬಿಬಿಎಂಪಿ ಸಿಬ್ಬಂದಿ ಜೊತೆಗೂಡಿ ಅತಿಕ್ರಮ ಪ್ರವೇಶ ಮಾಡಿ ಕೆಡವಿದ್ದು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಸದಸ್ಯ, ಮೂವರು ಬೆಂಬಲಿಗರ ಜೊತೆ ಸೇರಿ ಏಕಾಏಕಿ ಚೌಕಿಯನ್ನು ನೆಲಸಮಗೊಳಿಸಿದ್ದಾರೆ ಎಂದು ಎಚ್ಎಎಲ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಗೋವಿಂದರಾಜು ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.