ವೆಂಕಟರಮಣ ದೇವಸ್ಥಾನದ ಚಟುವಟಿಕೆ, ವ್ಯವಹಾರಗಳಲ್ಲಿ ನರೇಶ್ ಶೆಣೈ ಪಾಲ್ಗೊಳ್ಳುವಂತಿಲ್ಲ: ಹೈಕೋರ್ಟ್

Update: 2019-02-03 11:19 GMT

ಮಂಗಳೂರು, ಫೆ.3: ಕಾರ್ ಸ್ಟ್ರೀಟ್ ನಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು  ಅವಕಾಶ ನೀಡಬೇಕೆಂದು ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ತೀರ್ಪು ಹೊರಬೀಳುವವರೆಗೆ ಅರ್ಜಿದಾರನು ಕಾರ್ ಸ್ಟ್ರೀಟ್ ನ ವೆಂಕಟರಮಣ ದೇವಸ್ಥಾನದಚಟುವಟಿಕೆ ಹಾಗು ವ್ಯವಹಾರಗಳಲ್ಲಿ ಪಾಲ್ಗೊಳ್ಳಬಾರದು ಹಾಗು ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಸಮಿತಿಗಳ ವ್ಯವಹಾರ ಹಾಗು ಚಟುವಟಿಕೆಗಳಿಂದ ದೂರವಿರಬೇಕು” ಎಂದು ಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News