‘ಭಾರತ್ ಕೆ ಮನ್ ಕಿ ಬಾತ್-ಮೋದಿ ಕೆ ಸಾಥ್’ : ಬಿಜೆಪಿ ಸಂಕಲ್ಪ ಪತ್ರ ಅಭಿಯಾನ

Update: 2019-02-05 14:51 GMT

ಬೆಂಗಳೂರು, ಫೆ. 5: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಸಾಮಾನ್ಯರ ಅಭಿಪ್ರಾಯಗಳನ್ನೊಳಗೊಂಡ ‘ಬಿಜೆಪಿ ಸಂಕಲ್ಪಪತ್ರ’ ಸಿದ್ಧಪಡಿಸುವ ಅಭಿಯಾನ ‘ಭಾರತ್ ಕೆ ಮನ್ ಕಿ ಬಾತ್-ಮೋದಿ ಕೆ ಸಾಥ್’ ಪ್ರಚಾರ ಆಂದೋಲನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

ಮಂಗಳವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಮುಂಭಾಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಸ್ವೀಕರಿಸುವ ಸಲುವಾಗಿ ವಿನ್ಯಾಸಗೊಳಿಸಲಾಗಿರುವ ವಿಶೇಷ ವಾಹನಗಳಿಗೆ ಬಿಎಸ್‌ವೈ ಹಸಿರು ನಿಶಾನೆ ತೋರಿಸಿದರು.

ಕರ್ನಾಟಕ ರಾಜ್ಯದ ಪ್ರತಿ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಒಂದರಂತೆ ವಾಹನಗಳು ಸಂಚರಿಸಿ ಜನ ಸಾಮಾನ್ಯರಿಂದ ಸಲಹೆ ಪಡೆಯಲಿವೆ. ಒಟ್ಟು 14 ವಾಹನಗಳು ರಾಜ್ಯದಲ್ಲಿ ಸಂಚರಿಸಿ ಜನರು ಸಲಹೆಗಳನ್ನು ಸ್ವೀಕರಿಸಲಿವೆ ಎಂದು ಪಕ್ಷ ಹೇಳಿದೆ.

ವಿಶೇಷವಾಗಿ ವಿನ್ಯಾಸಗೊಳಿಸಿರುವ ಬಿಜೆಪಿ ಪ್ರಚಾರ ವಾಹನದಲ್ಲಿ ಪ್ರಧಾನಿ ಮೋದಿ ಭಾವಚಿತ್ರವನ್ನು ಹೊರತುಪಡಿಸಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಜ್ಯದ ಯಾವೊಬ್ಬ ಮುಖಂಡರ ಭಾವಚಿತ್ರವನ್ನು ಪ್ರಚಾರ ವಾಹನದಲ್ಲಿ ಅಳವಡಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News