ಕರ್ನಾಟಕ ಭವನದಲ್ಲಿ ಸಾಹಿತಿಗಳಿಂದ ಪಾನಗೋಷ್ಠಿ: ಕ್ರಮಕ್ಕೆ ಆಗ್ರಹ
Update: 2019-02-13 16:39 GMT
ಬೆಂಗಳೂರು, ಫೆ.13: ಹೊಸದಿಲ್ಲಿಯ ಕರ್ನಾಟಕ ಭವನದಲ್ಲಿ ರಾಜ್ಯದ ಕೆಲ ಸಾಹಿತಿಗಳು ಪಾನಗೋಷ್ಠಿ ನಡೆಸಿದ ಗದ್ದಲ ವಿಧಾನ ಪರಿಷತ್ತಿನಲ್ಲಿಂದು ಪ್ರಸ್ತಾಪವಾಯಿತು.
ಬುಧವಾರ ಶೂನ್ಯ ವೇಳೆಯಲ್ಲಿ ಬಿಜೆಪಿಯ ಸದಸ್ಯ ಅರುಣ್ ಶಹಾಪೂರ ಅವರು ವಿಷಯವನ್ನು ಪ್ರಸ್ತಾಪಿಸಿದ ಈ ಘಟನೆ ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿದ್ದು, ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಿದರು.
ಕೆಲ ಸಾಹಿತಿಗಳು ಪಾನಗೋಷ್ಠಿ ನಡೆಸಿ ಗದ್ದಲವೆಬ್ಬಿಸಿದ್ದಾರೆ. ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ದಿನೇಶ್ಮಾಹೇಶ್ವರಿ ಅವರ ಸೂಚನೆಗೂ ಮನ್ನಣೆ ನೀಡದೆ ಗದ್ದಲ ಮುಂದುವರಿಸಿದ ಈ ಸಾಹಿತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸಭಾ ನಾಯಕಿ ಜಯಮಾಲಾ ಅವರು ಈ ಬಗ್ಗೆ ಸರಕಾರದಿಂದ ಉತ್ತರ ಕೊಡಿಸುವ ಭರವಸೆ ನೀಡಿದರು.