ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ: ಪ್ರಭಾಕರ್ ರೆಡ್ಡಿ ಮತ್ತೆ ಬಂಧನ

Update: 2019-03-27 17:05 GMT

ಬೆಂಗಳೂರು, ಮಾ.27: ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಆರೋಪದಡಿ ಉದ್ಯಮಿ ಪ್ರಭಾಕರ್ ರೆಡ್ಡಿಯನ್ನು ಇಲ್ಲಿನ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪ್ರಭಾಕರ್ ರೆಡ್ಡಿ ವಿರುದ್ಧ ಕೋಟ್ಯಾಂತರ ರೂಪಾಯಿ ತೆರಿಗೆ ವಂಚನೆ ಆರೋಪ ಕೇಳಿಬಂದಿತ್ತು. ಐಟಿ ಇಲಾಖೆ ತೆರಿಗೆ ವಸೂಲಿ ಸಂಬಂಧ ವಾರೆಂಟ್ ಜಾರಿ ಗೊಳಿಸಿತ್ತು. ಈ ಹಿನ್ನಲೆ ಪ್ರಭಾಕರ್ ರೆಡ್ಡಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಗಷ್ಟೇ, ಅಕ್ರಮ ಭೂ ಕಬಳಿಕೆ, ಭೂ ಒತ್ತುವರಿಗಳ ಪ್ರಕರಣದಲ್ಲಿ ಪ್ರಭಾಕರ್ ರೆಡ್ಡಿ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News