ಕಾನೂನು ಪ್ರಕಾರ ಶಾಸಕರ ಅನರ್ಹಗೊಳಿಸಿದ್ದೇನೆ: ಸ್ಪೀಕರ್

Update: 2019-07-28 07:04 GMT

 ಬೆಂಗಳೂರು, ಜು.28: ಬಿಜೆಪಿ ಸರಕಾರದಲ್ಲಿ ಸ್ಪೀಕರ್ ಆಗಿ ಮುಂದುವರಿಯಲು ನನಗೆ ಇಷ್ಟವಿಲ್ಲ. ಎಲ್ಲವನ್ನೂ ಸೋಮವಾರ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ತಿಳಿಸುತ್ತೇನೆ. ಕಾನೂನು ಪ್ರಕಾರ ಶಾಸಕರನ್ನು ಅನರ್ಹಗೊಳಿಸಿದ್ದೇನೆ. ನಾನು ಮಾಡಿದ್ದು ಸರಿ ಇದ್ದರೆ ತಲೆ ಎತ್ತಿ ಓಡಾಡುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ಅಧಿವೇಶನದ ತರಾತುರಿ ಇರುವ ಕಾರಣ ಇಂದು ಪತ್ರಿಕಾಗೋಷ್ಠಿ ನಡೆಸಿ ಶಾಸಕರ ರಾಜೀನಾಮೆ ಪತ್ರವನ್ನು ಇತ್ಯರ್ಥ ಪಡಿಸಲು ಬಯಸಿದ್ದೇನೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಲಹೆಯ ಮೇಲೆ ಸೋಮವಾರ ಅಧಿವೇಶನ ಕರೆಯಲಾಗಿದೆ. ಶನಿವಾರ ಹಾಗೂ ರವಿವಾರ ಎರಡೂ ದಿನ ನಮ್ಮ ಕಚೇರಿ ಕೆಲಸ ಮಾಡುತ್ತಿದೆ ಎಂದು ಸ್ಪೀಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News