ನಗದು ದರೋಡೆ ಆರೋಪ: ಅಪ್ರಾಪ್ತ ಬಾಲಕರು ವಶಕ್ಕೆ

Update: 2019-07-29 12:39 GMT

ಬೆಂಗಳೂರು, ಜು.29: ಕೂಲಿ ಕಾರ್ಮಿಕರೊಬ್ಬರ ಬಳಿ 10 ಸಾವಿರ ನಗದು ದೋಚಿ ಪರಾರಿಯಾಗಿದ್ದ ಆರೋಪದಡಿ ಇಬ್ಬರು ಅಪ್ರಾಪ್ತ ಬಾಲಕರನ್ನು ಇಲ್ಲಿನ ವಿದ್ಯಾರಣ್ಯಪುರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

16 ವರ್ಷದ ಇಬ್ಬರು ಅಪ್ರಾಪ್ತ ಬಾಲಕರನ್ನು ಬಾಲ ನ್ಯಾಯಮಂಡಲಿ ಮುಂದೆ ಪೋಷಕರ ಸಮ್ಮುಖದಲ್ಲಿ ಹಾಜರುಪಡಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು ತಿಳಿಸಿದ್ದಾರೆ.

ಕಳೆದ ಜು.25 ರಂದು ಕಾರ್ಮಿಕ ಸಂಜಯ್ ಕುಮಾರ್ ಎಂಬುವರು 10 ಸಾವಿರ ಹಣವನ್ನಿಟ್ಟುಕೊಂಡು ನಗರದ ಸಿಂಗಪುರದ ಪ್ಯಾರಡೈಸ್ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಈ ಇಬ್ಬರು ಬಾಲಕರು, ಅಡ್ಡಗಟ್ಟಿ ಹಣವನ್ನು ಕಸಿದು ಪರಾರಿಯಾಗಿದ್ದರು ಎನ್ನಲಾಗಿದೆ.

ಈ ಸಂಬಂಧ ಕೂಲಿ ಕಾರ್ಮಿಕ ನೀಡಿದ್ದ ದೂರು ದಾಖಲಿಸಿ, ತನಿಖೆ ಕೈಗೊಂಡ ವಿದ್ಯಾರಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕರನ್ನು ವಶಪಡಿಸಿ ಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News