ಸುಲಿಗೆ ಯತ್ನ; 11 ಜನರ ಬಂಧನ

Update: 2019-09-01 11:27 GMT

ಬೆಂಗಳೂರು, ಸೆ.1: ಪಾದಚಾರಿಗಳನ್ನು ಗುರಿಯಾಗಿಸಿಕೊಂಡು ಸುಲಿಗೆಗೆ ಮುಂದಾಗಿದ್ದ ಮಹಿಳೆ ಸೇರಿ ಒಟ್ಟು 11 ಮಂದಿಯನ್ನು ಇಲ್ಲಿನ ಕೋಣನಕುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಗಿರಿಜಮ್ಮ (47), ರಾಜು(51), ರಘುವರನ್(30), ಸುರೇಶ (36), ಲಿಂಗರಾಜು (34), ಸ್ಟೀಫನ್ (25), ಮಣಿಕಂಠನ್(25), ಸತೀಶ್ (20), ರಾಜೇಶ್ (21), ಅಬ್ದುಲ್ ಸಮ್ಮರ್ (29), ಸತೀಶ್ ಕುಮಾರ್(24) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 2 ಆಟೊ, ಚಿನ್ನ-ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಕೋಣನಕುಂಟೆ, ಕಾಡುಗೋಡಿ, ಮಲ್ಲೇಶ್ವರಂನ ತಲಾ 1 ದರೋಡೆ ಪ್ರಕರಣಗಳನ್ನು ಬೇಧಿಸಲಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News