ಅ.27ರಂದು ಕುದ್ರೋಳಿಯಲ್ಲಿ ರಕ್ತದಾನ ಶಿಬಿರ

Update: 2019-10-26 06:23 GMT

ಮಂಗಳೂರು, ಅ.26: ಜೂನಿಯರ್ ಫ್ರೆಂಡ್ಸ್ ಸರ್ಕಲ್, ಕುದ್ರೋಳಿ ಯಂಗ್ ಬಾಯ್ಸ್ ಮತ್ತು ಹ್ಯುಮೇನಿಟೇರಿಯನ್ ರಿಲೀಫ್ ಸೊಸೈಟಿ ಮಂಗಳೂರು ವತಿಯಿಂದ ಕೆ.ಎಂ.ಸಿ. ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಕಾರದಲ್ಲಿ ಅ.27ರಂದು ಕುದ್ರೋಳಿ ಉರ್ದು ಶಾಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 1:30 ರ ವರೆಗೆ ನಡೆಯುವ ಶಿಬಿರವನ್ನು ನಡುಪಳ್ಳಿ ಜುಮಾ ಮಸೀದಿಯ ಖತೀಬ್ ರಿಯಾಝ್ ಫೈಝಿ ಉದ್ಘಾಟನೆ ನಡೆಸಲಿದ್ದಾರೆ. ಹ್ಯುಮೇನಿಟೇರಿಯನ್ ರಿಲೀಫ್ ಸೊಸೈಟಿಯ ಸದಸ್ಯ ಮಕ್ಬೂಲ್ ಅಹ್ಮದ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News