ಆಂಧ್ರಪ್ರದೇಶ ಮೂಲದ ಮೀನುಗಾರ ನಾಪತ್ತೆ
ಮಂಗಳೂರು, ಅ. 26: ಮೀನುಗಾರಿಕೆಗಾಗಿ ಬೋಟಿನಲ್ಲಿ ಸಮುದ್ರಕ್ಕೆ ತೆರಳಿದ್ದ ಮೀನುಗಾರ ನಾಪತ್ತೆಯಾದ ಬಗ್ಗೆ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಂಧ್ರಪ್ರದೇಶದ ನೆಲ್ಲೂರು ನಿವಾಸಿ ವಯಿಲ ಅಂಕಯ್ಯ ನಾಪತ್ತೆಯಾದ ಮೀನುಗಾರ.
ಅ.19ರಂದು ದಕ್ಕೆಯಿಂದ ಮೀನುಗಾರಿಕೆಗೆ 11 ಮಂದಿ ತೆರಳಿದ್ದರು. ಕಡಲಲ್ಲಿ ಗಾಳಿಯ ಹೊಡೆತವಿರುದ್ದ ಕಾರಣ ಸಮುದ್ರದ ಸಮೀಪದಲ್ಲಿಯೇ ಮೀನುಗಾರಿಕೆ ನಡೆಸಿದ್ದರು. ಅ.23ರಂದು ಸಹೋದ್ಯೋಗಿ ವಯಿಲ ಅಂಕಯ್ಯ ನಾಪತ್ತೆಯಾಗಿದ್ದಾರೆ. ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾ ಗಿಲ್ಲ. ಉಳಿದ ಮೀನುಗಾರರು ಶುಕ್ರವಾರ ರಾತ್ರಿ ದಕ್ಕೆಗೆ ವಾಪಸಾಗಿದ್ದಾರೆ. ಮೀನುಗಾರಿಕೆ ಸಮಯ ಜಾಕೆಟ್ ಧರಿಸಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಹರೆ: 5.9 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸದೃಢ ಶರೀರ, ಉರುಟು ಮುಖ, ಕಪ್ಪು ತಲೆಕೂದಲು, ಕೆಂಪು ಬಣ್ಣದ ಟೀ-ಶರ್ಟ್, ನೀಲಿ ಬಣ್ಣದ ಬರ್ಮುಡಾ ಧರಿಸಿದ್ದರು. ತೆಲುಗು ಭಾಷಿಗ. ಎಡ ಕೆನ್ನೆಯಲ್ಲಿ ಬಿಳಿ ಮಚ್ಚೆ ಇದೆ.
ನಾಪತ್ತೆಯಾದ ಮೀನುಗಾರನ ಮಾಹಿತಿ ದೊರೆತಲ್ಲಿ ಮಂಗಳೂರು ಉತ್ತರ (ಬಂದರ್) ಠಾಣೆ (0824- 2220516) ಸಂಪರ್ಕಿಸಬಹುದು.