ಕಿನ್ಯ ಬೆಳರಿಂಗೆ ಸರಕಾರಿ ಶಾಲೆಗೆ ಹೊಸ ಕಟ್ಟಡ: ಖಾದರ್ ಭರವಸೆ

Update: 2019-10-29 11:59 GMT

ಮಂಗಳೂರು, ಅ.29:ಕಿನ್ಯ ಬೆಳರಿಂಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಶಾಲೆಗೆ ಹೊಸ ಕಟ್ಟಡದ ಭರವಸೆ ನೀಡಿದ್ದಾರೆ.

ಈ ಸಂದರ್ಭ ಸೈಯದ್ ಅಮೀರ್ ತಂಙಳ್ ಕಿನ್ಯ, ಜಮಾತ್ ಅಧ್ಯಕ್ಷ ಇಸ್ಮಾಯೀಲ್ ಹಾಜಿ, ಕೋಶಾಧಿಕಾರಿ ಬಾವು ಹಾಜಿ, ವಾದಿತ್ವಯ್ಯಬ ಸ್ಥಾಪಕ ಅಬೂಸಾಲಿ ಹಾಜಿ ಕಿನ್ಯ, ತಾಪಂ ಸದಸ್ಯ ಸಿದ್ದೀಕ್ ತಲಪಾಡಿ, ಕಿನ್ಯ ಗ್ರಾಪಂ ಉಪಾಧ್ಯಕ್ಷ ಸಿರಾಜುದ್ದೀನ್ ಕಿನ್ಯ, ಸದಸ್ಯರಾದ ಫಾರೂಕ್ ಕಿನ್ಯ, ಕೆ.ಬಿ. ಅಬೂಸಾಲಿ, ಮುಹಮ್ಮದ್, ಹಮೀದ್, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಮೊಯಿದಿನ್ (ಅಬ್ಬು) ಚಾದಿಪಡ್ಪು, ಬೆಳರಿಂಗೆ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಉಮರ್ ಕಲ್ಲಾಂಡ, ಎಸ್‌ಡಿಎಂಸಿ ಅಧ್ಯಕ್ಷ ಪಿಐ ಅಹಮ್ಮದ್, ಸದಸ್ಯ ಇಬ್ರಾಹಿಂ, ಮೊಯಿದಿನ್ ಎಂಎನ್, ಶೈಖ್ ಇಬ್ರಾಹಿಂ ಕುರಿಯಕ್ಕಾರ್, ಹಾರಿಸ್ ಕುರಿಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News