ಸಜೀಪನಡು: ರಸ್ತೆ ಕಾಮಗಾರಿಗೆ ಶಾಸಕ ಯು.ಟಿ.ಖಾದರ್ ಶಿಲಾನ್ಯಾಸ
ಮಂಗಳೂರು, ಅ.29: ಮಂಗಳೂರು ವಿಧಾನಸಭಾ ಕ್ಷೇತ್ರದ ಸಜೀಪನಡು ಗ್ರಾಮದ ಜಂಕ್ಷನ್ನಿಂದ ಹೊಳೆಬದಿಯವರೆಗೆ ನಿರ್ಮಿಸಲಾಗುವ ಕಾಂಕ್ರಿಟೀಕೃತ ರಸ್ತೆಗೆ ಶಾಸಕ ಯು.ಟಿ.ಖಾದರ್ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.
ರಾಜ್ಯ ಖಾದಿ ಮಂಡಳಿಯ ಮಾಜಿ ನಿರ್ದೇಶಕ ಹಾಜಿ ಎಸ್. ಅಬ್ಬಾಸ್, ಸಜೀಪ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್, ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್, ಜೆಡಿಎಸ್ ಮುಖಂಡ ಎಸ್.ಮುಹಮ್ಮದ್ ಶಫಿ, ಮಾಜಿ ತಾಪಂ ಸದಸ್ಯ ಪ್ರವೀಣ್ ಆಳ್ವ, ಇರಾ ಗ್ರಾಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್, ಸಜೀಪನಡು ಗ್ರಾಪಂ ಮಾಜಿ ಅಧ್ಯಕ್ಷ ಸೋಮನಾಥ ಭಂಡಾರಿ, ಎಸ್.ಕೆ ಮುಹಮ್ಮದ್, ಸಜೀಪನಡು ಗ್ರಾಪಂ ಸದಸ್ಯ ರಫೀಕ್ ಗೋಳಿಪಡ್ಪು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ತಿಯಾಝ್ ತುಂಬೆ, ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ನಿರ್ದೇಶಕ ರಮೇಶ್ ಶೆಟ್ಟಿ ಬೋಳಿಯಾರ್, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜೀಪ ಹನೀಫ್, ಆಸಿಫ್ ಉಪಸ್ಥಿತರಿದ್ದರು.