ಉರ್ವಸ್ಟೋರ್: ಸಾರ್ವಜನಿಕರಿಂದ ರಸ್ತೆ ದುರಸ್ತಿ

Update: 2019-10-29 17:03 GMT

ಮಂಗಳೂರು, ಅ.29: ಉರ್ವಸ್ಟೋರ್ ಜಂಕ್ಷನ್‌ನಿಂದ ಸುಂಕದಕಟ್ಟೆ ಪ್ರದೇಶಕ್ಕೆ ಹೋಗುವ ರಸ್ತೆಯು ಹೊಂಡಗಳಿಂದ ಕೂಡಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ಮನಪಾದ ಗಮನ ಸೆಳೆದರೂ ಪ್ರಯೋಜನವಾಗಲಿಲ್ಲ. ಆ ಹಿನ್ನಲೆಯಲ್ಲಿ ಸುಂಕದಕಟ್ಟೆ ಪ್ರದೇಶದ ಸಾರ್ವಜನಿಕರು ರವಿವಾರ ದುರಸ್ತಿ ಕಾರ್ಯ ನಡೆಸಿ ಗಮನ ಸೆಳೆದರು.

ದುರಸ್ಥಿ ಕಾರ್ಯದಲ್ಲಿ ಸ್ಥಳೀಯರಾದ ಮನೋಜ್ ಕುಲಾಲ್, ಯೋಗೀಶ್ ಕುಲಾಲ್, ಕೇಶವ ಎಂ. ಎಚ್, ಕೃಷ್ಣ ಗಟ್ಟಿ, ಶಶಿ, ಪ್ರಶಾಂತ್ ಎಂ.ಬಿ, ನಾಗೆಂದ್ರ, ರಘುವೀರ, ಸನತ್, ಇಕ್ಬಾಲ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News