ಉರ್ವಸ್ಟೋರ್: ಸಾರ್ವಜನಿಕರಿಂದ ರಸ್ತೆ ದುರಸ್ತಿ
Update: 2019-10-29 17:03 GMT
ಮಂಗಳೂರು, ಅ.29: ಉರ್ವಸ್ಟೋರ್ ಜಂಕ್ಷನ್ನಿಂದ ಸುಂಕದಕಟ್ಟೆ ಪ್ರದೇಶಕ್ಕೆ ಹೋಗುವ ರಸ್ತೆಯು ಹೊಂಡಗಳಿಂದ ಕೂಡಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಬಗ್ಗೆ ಸಾರ್ವಜನಿಕರು ಮನಪಾದ ಗಮನ ಸೆಳೆದರೂ ಪ್ರಯೋಜನವಾಗಲಿಲ್ಲ. ಆ ಹಿನ್ನಲೆಯಲ್ಲಿ ಸುಂಕದಕಟ್ಟೆ ಪ್ರದೇಶದ ಸಾರ್ವಜನಿಕರು ರವಿವಾರ ದುರಸ್ತಿ ಕಾರ್ಯ ನಡೆಸಿ ಗಮನ ಸೆಳೆದರು.
ದುರಸ್ಥಿ ಕಾರ್ಯದಲ್ಲಿ ಸ್ಥಳೀಯರಾದ ಮನೋಜ್ ಕುಲಾಲ್, ಯೋಗೀಶ್ ಕುಲಾಲ್, ಕೇಶವ ಎಂ. ಎಚ್, ಕೃಷ್ಣ ಗಟ್ಟಿ, ಶಶಿ, ಪ್ರಶಾಂತ್ ಎಂ.ಬಿ, ನಾಗೆಂದ್ರ, ರಘುವೀರ, ಸನತ್, ಇಕ್ಬಾಲ್ ಪಾಲ್ಗೊಂಡಿದ್ದರು.