ಎಸ್‍ಎಂಎ ರಾಜ್ಯ ಸಮಿತಿ ಪದಾಧಿಕಾರಿಗಳ ಆಯ್ಕೆ

Update: 2019-10-31 14:00 GMT

ಮಂಗಳೂರು: ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಸಮಿತಿಯ 2019-20 ನೇ ಸಾಲಿನ ವಾರ್ಷಿಕ ಕೌನ್ಸಿಲ್ ಸಭೆಯು ನಗರದ ಸೂರ್ಯ ಹೋಟೇಲ್ ಸಭಾಂಗಣದಲ್ಲಿ ಸಯ್ಯಿದ್ ಉಜಿರೆ ತಂಙಳ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್ ಉದ್ಘಾಟಿಸಿದರು. ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರರಾಗಿ ಸಯ್ಯಿದ್ ಅಲವೀ ಜಲಾಲುದ್ದೀನ್ ಅಲ್-ಹಾದೀ ತಂಙಳ್ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಕಾರಾಜೆ, ಕೋಶಾಧಿಕಾರಿಯಾಗಿ ಯೂಸುಫ್ ಹಾಜಿ ಉಪ್ಪಳ್ಳಿ, ಚಿಕ್ಕಮಗಳೂರು, ಕಾರ್ಯಾಧ್ಯಕ್ಷರಾಗಿ ಆತೂರು ಸಅದ್ ಮುಸ್ಲಿಯಾರ್,  ಸಂಚಾಲಕರಾಗಿ ಕೆ. ಕೆ. ಎಂ. ಕಾಮಿಲ್ ಸಖಾಫಿ ಸುರಿಬೈಲು, ಉಪಾಧ್ಯಕ್ಷರುಗಳಾಗಿ ಒ. ಕೆ. ಸಯೀದ್ ಮುಸ್ಲಿಯಾರ್ ಜೋಗಿಬೆಟ್ಟು(ಟ್ರೈನಿಂಗ್ ವಿಭಾಗ), ಕತರ್ ಬಾವ ಹಾಜಿ (ಕ್ಷೇಮ ಕಾರ್ಯ ವಿಭಾಗ), ಗುಡ್ ವೀಲ್ ಮೊಯ್ದೀನ್ ಹಾಜಿ ಕಾಪು(ಸಂಘಟನೆ), ಎ. ಕೆ. ಅಹ್ಮದ್ ಬೆಳ್ತಂಗಡಿ(ಸಂಸ್ಥೆ, ವಕ್ಫ್ ), ಎಂ. ಕೆ. ಬದ್ರುದ್ದೀನ್ ಪರಪ್ಪು(ಪಬ್ಲಿಕ್ ರಿಲೇಷನ್);
ಕಾರ್ಯದರ್ಶಿಗಳಾಗಿ  ಮುಹಮ್ಮದ್ ಹನೀಫ್ ಬೆಜ್ಜವಳ್ಳಿ(ಟ್ರೈನಿಂಗ್ ವಿಭಾಗ), ಕೆ. ಎ. ಅಶ್ರಫ್ ಸಖಾಫಿ ಮಾಡಾವು(ಕ್ಷೇಮ ಕಾರ್ಯ ವಿಭಾಗ), ಎಂ. ಬಿ. ಮುಹಮ್ಮದ್ ಸಾದಿಕ್ ಮಲೆಬೆಟ್ಟು(ಸಂಘಟನಾ ಕಾರ್ಯ), ಎನ್. ಎಸ್. ಉಮರ್ ಮಾಸ್ಟರ್ (ಸಂಸ್ಥೆ, ವಕ್ಫ್ ಕಾರ್ಯ), ಎ. ಎಂ. ಇಸ್ಮಾಯೀಲ್ ಸಅದಿ ಉರುಮನೆ(ಪಬ್ಲಿಕ್ ರಿಲೇಷನ್)ಆಯ್ಕೆಯಾದರು.

ಜೆಪ್ಪು ಅಬ್ದುರ್ರಹ್ಮಾನ್ ಮದನಿ ಯವರು ಸ್ವಾಗತಿಸಿದರು. ಕೊಡುಂಗಾಯಿ ಅಬ್ದುಲ್ ಹಮೀದ್ ಹಾಜಿ ಧನ್ಯವಾದಗೈದರು. ಕೆ. ಕೆ. ಎಂ. ಕಾಮಿಲ್ ಸಖಾಫಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News