ರಸ್ತೆ ಅಗಲೀಕರಣ: ನ.3ರಂದು ಸಮಾಲೋಚನಾ ಸಭೆ

Update: 2019-11-01 16:12 GMT

ಉಡುಪಿ, ನ.1: ಉಡುಪಿ ನಗರಸಭಾ ವ್ಯಾಪ್ತಿಯ ಮಿಶನ್ ಆಸ್ಪತ್ರೆ ವೃತ್ತದಿಂದ ಕೊರಂಗ್ರಪಾಡಿ ರಸ್ತೆ ಜಂಕ್ಷನ್‌ವರೆಗಿನ ರಸ್ತೆಯನ್ನು ನಗರೋತ್ಥಾನ 3ರಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.

ಈ ರಸ್ತೆ ಕೆಲವೊಂದು ಕಡೆ ತೀರಾ ಅಗಲ ಕಿರಿದಾಗಿದ್ದು, ಅಂತಹ ಕಡೆ ರಸ್ತೆ ಅಗಲಗೊಳಿಸುವ ಸಲುವಾಗಿ ರಸ್ತೆಯ ಎರಡೂ ಬದಿ ಇರುವ ಜಮೀನು ಮಾಲಕರೊಂದಿಗೆ ಶಾಸಕ ರಘುಪತಿ ಭಟ್ ನ.3ರ ಸಂಜೆ 4:00ಕ್ಕೆ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ಸಮಾಲೋನಾ ಸಭೆಯನ್ನು ಹಮ್ಮಿಕೊಂಡಿದ್ದಾರೆ.

ಸಭೆಯಲ್ಲಿ ನಗರಸಭಾ ಸದಸ್ಯರು ಭಾಗವಹಿಸಲಿದ್ದು, ರಸ್ತೆಯ ವ್ಯಾಪ್ತಿಯಲ್ಲಿ ಬರುವ ಭೂಮಾಲಕರು ಈ ಸಬೆಗೆ ಹಾಜರಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News