ಪುತ್ತೂರು: ಸಯ್ಯದ್ ಅಲೀ ತಂಙಳ್ ನಿಧನ

Update: 2019-11-02 11:46 GMT

ಪುತ್ತೂರು: ತಾಲೂಕಿನ ಪಡೀಲ್ ನಿವಾಸಿ ಕರಾವಳಿ ಕಸ್ಟ್ರಕ್ಷನ್ ನ ಕಾಂಟ್ರಾಕ್ಟರ್ ರಾಗಿದ್ದ ಸಯ್ಯದ್ ಅಲೀ ತಂಙಳ್ (66) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು.

ಬೆಳ್ತಂಗಡಿ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್‌ನ ಸ್ಥಾಪಕರಲ್ಲಿ ಓರ್ವರಾದ ಅಲೀ ತಂಙಳ್ ಅವರು ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ, ಪುತ್ರರಾದ ಬೆಳ್ತಂಗಡಿ ದಾರುಸ್ಸಲಾಂ ಎಜ್ಯುಕೇಶನ್ ಸೆಂಟರ್‌ನ ಉಪ ಪ್ರಾಂಶುಪಾಲ ಸಯ್ಯದ್ ಅಕ್ರಂ ಅಲೀ ತಂಙಳ್ ಹಾಗೂ ದ.ಕ.ಜಿಲ್ಲಾ ಯೂತ್ ಮುಸ್ಲಿಂ ಲೀಗ್ ಅಧ್ಯಕ್ಷ ಅಫ್ವಾಮ್ ಅಲೀ ತಂಙಳ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News