ನ.7ರಂದು ಗುರುಪುರ ಸೇತುವೆಯಲ್ಲಿ ಸಂಚಾರ ನಿಷೇಧ

Update: 2019-11-06 07:09 GMT

ಮಂಗಳೂರು, ನ.6: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಹಳೆ ಸೇತುವೆಯ ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ನ.7ರಂದು ದಿನವಿಡೀ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸೇತುವೆಯಲ್ಲಿ ರಸ್ತೆ ತೀರಾ ಹಾಳಾಗಿದ್ದು, ದುರಸ್ತಿ ಪ್ರಯುಕ್ತ ನ.7ರಂದು ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆ ತನಕ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಬರುವವರು ಕೈಕಂಬ- ಬಜ್ಪೆ- ಮರವೂರು ಸೇತುವೆ ರಸ್ತೆ ಮೂಲಕ ತಲುಪಬೇಕು. ಕೈಕಂಬ- ಪೊಳಲಿ- ಬಿ.ಸಿ.ರೋಡ್ ಮೂಲಕವೂ ಮಂಗಳೂರಿಗೆ ತಲುಪಬಹುದು.

ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ತೆರಳುವವರು ಮಂಗಳೂರಿನಿಂದ ಮರವೂರು ಸೇತುವೆ- ಬಜ್ಪೆ- ಕೈಕಂಬ- ಮೂಡುಬಿದಿರೆ ರಸ್ತೆ ಮೂಲಕ ತಲುಪಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News