ಗಂಜಿಮಠ: ನ.8ರಂದು ಉಚಿತವಾಗಿ ಮಧುಮೇಹ, ಹೃದಯ ತಪಾಸಣೆ ಶಿಬಿರ

Update: 2019-11-06 12:51 GMT

ಮಂಗಳೂರು, ನ.6;ಆಯುರ್ ಸ್ಪರ್ಶ ಮಧುಮೇಹದ ಮುಕ್ತ ಭಾರತ ಜನಜಾಗೃತಿ ಅಭಿಯಾನದ ಅಂಗವಾಗಿ ನ.8ರಂದು ರಾಜ್ ಅಕಾಡೆಮಿ ಶಾಲೆ ಗಂಜಿ ಮಠದಲ್ಲಿ ಬೆ.9ರಿಂದ 12.30ರವರೆಗೆ ಉಚಿತವಾಗಿ ಮಧುಮೇಹ, ಹ್ರದಯ ತಪಾಸಣೆ ಶಿಬಿರ ನಡೆಯಲಿದೆ ಎಂದು ಆಯುರ್ ಸ್ಪರ್ಶ ಫೌಂಡೇಶನ್ ನ ಅಧ್ಯಕ್ಷ ಡಾ.ಸತೀಶ್ ಶಂಕರ ಬಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮ ದ ಅಂಗವಾಗಿ ಹಮ್ಮಿಕೊಂಡ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.ಕಾರ್ಯಕ್ರಮದಲ್ಲಿ ಮಧುಮೇಹ ದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಸತೀಶ್ ಶಂಕರ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ರಾಜ್ ಅಕಾಡೆಮಿ ಯ ಪ್ರಾಂಶುಪಾಲರಾದ ಪ್ರವೀಣ ಶೆಟ್ಟಿ,ರಾಜ್ ಅಕಾಡೆಮಿ ಯ ಟ್ರಸ್ಟಿ ದಶರಥ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News