ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವ: ಕರ್ನಾಟಕ ಮುಸ್ಲಿಂ ಜಮಾಅತ್
Update: 2019-11-09 15:49 GMT
ಉಡುಪಿ, ನ.9: ಬಾಬರಿ ಮಸೀದಿಯ ವಿವಾದದ ಬಗ್ಗೆ ಬಹಳ ವರ್ಷಗಳ ಬಳಿಕ ನೀಡಿದ ಸುಪ್ರೀಂ ಕೋರ್ಟ್ ತೀರ್ಪು ಮುಸ್ಲಿಮರಲ್ಲಿ ಅತೃಪ್ತಿ ತಂದಿದ್ದರೂ ಕೋರ್ಟ್ನ ತೀರ್ಪನ್ನು ನಾವು ಗೌರವಿಸುತ್ತೇವೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿ, ಸುನ್ನೀ ಸಂಯುಕ್ತ ಜಮಾಅತ್ ಹಾಗೂ ಎಸ್ವೈಎಸ್ ಉಡುಪಿ ಜಿಲ್ಲಾ ಸಮಿತಿ ತಿಳಿಸಿದೆ.
ಹಲವು ವರ್ಷಗಳಿಂದ ಹಿಂದು ಹಾಗೂ ಮುಸ್ಲಿಮರ ಮಧ್ಯೆ ಐಕ್ಯತೆಯನ್ನು ಕದಡಿಸುವವರಿಗೆ ಆಯುಧವಾಗಿರುವ ಈ ಬಾಬರಿ ಮಸೀದಿ ಹಾಗೂ ರಾಮ ಜನ್ಮಭೂಮಿಯ ಸಮಸ್ಯೆಗೆ ಸುಪ್ರೀಂ ಕೋರ್ಟ್ ನಾಂದಿ ಹಾಡಿರುವುದು ಸಂತೋಷಕರ. ಈ ಒಂದು ವಿವಾದದಿಂದ ತುಂಬಾ ಮಾನವ ಜೀವಗಳನ್ನು ನಾವು ಕಳೆದುಕೊಂಡಿದೆ. ಈ ವಿಚಾರದಲ್ಲಿ ಯಾರು ಕೂಡ ಸಮಾಜದ ಐಕ್ಯತೆಗೆ ಭಂಗತರುವ ಕೆಲಸ ಮಾಡಬಾರದು ಎಂದು ಸಮಿತಿ ಪ್ರಕಟಣೆಯಲ್ಲಿ ಮನವಿ ಮಾಡಿದೆ.