ಉಳ್ಳಾಲ: ಸೈಯದ್ ಮದನಿ ಮೊಹಲ್ಲಾ ಒಕ್ಕೂಟದಿಂದ ಮೀಲಾದ್ ಕಾಲ್ನಡಿಗೆ ಜಾಥಾ

Update: 2019-11-10 06:21 GMT

ಉಳ್ಳಾಲ, ನ.10: ಮೀಲಾದುನ್ನಬಿ ಪ್ರಯುಕ್ತ ಉಳ್ಳಾಲ ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ವತಿಯಿಂದ ರವಿವಾರ ಬೆಳಗ್ಗೆ ಕಾಲ್ನಡಿಗೆ ಜಾಥಾ ನಡೆಯಿತು.

 ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ನೇತೃತ್ವದಲ್ಲಿ ಹಝ್ರತ್ ಅಚ್ಚಿ ಸಾಹೇಬ್ ಖ.ಸಿ ದರ್ಗಾ ಝಿಯಾರತ್ ನೊಂದಿಗೆ ಪ್ರಾರಂಭಗೊಂಡ ಜಾಥಾ ಅಸ್ಸೈಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ಉಳ್ಳಾಲ ದರ್ಗಾದಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭ ದರ್ಗಾ ಝಿಯಾರತ್ ಗೆ ಸೈಯದ್ ಜಲಾಲುದ್ದೀನ್ ತಂಙಳ್ ನೇತೃತ್ವ ನೀಡಿದರು.

ಸ್ತಳೀಯ ಖತೀಬ್ ಅಬೂ ಝಿಯಾದ್ ಮದನಿ ಪಟ್ಟಾಂಬಿ ದುಆ ನೆರೆವೇರಿಸಿದರು.

ಶಾಸಕ ಯು.ಟಿ.ಖಾದರ್, ಉಳ್ಳಾಲ ದರ್ಗಾ ಸಮಿತಿಯ ಮಾಜಿ ಅಧ್ಯಕ್ಷ ಹಂಝ ಹಾಜಿ ಮಾತನಾಡಿ ಶುಭ ಹಾರೈಸಿದರು.

ಎಸ್.ವೈ.ಎಸ್. ದ.ಕ. ಜಿಲ್ಲಾ ಕೋಶಾಧಿಕಾರಿ ಹನೀಫ್ ಹಾಜಿ ಉಳ್ಳಾಲ, ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಸಖಾಫಿ,

ಮುನೀರ್  ಸಖಾಫಿ ಉಳ್ಳಾಲ, ಸೈಯದ್ ಝಿಯಾದ್ ತಂಙಳ್, ಖುಬೈಬ್ ತಂಙಳ್, ಶರೀಫ್ ಸಅದಿ ಸುಂದರಿಬಾಗ್, ಕಲ್ಲಾಪು ಮಸೀದಿಯ ಅಧ್ಯಕ್ಷ ಅಬ್ದುಲ್ ಬುಖಾರಿ, ಕೌನ್ಸಿಲರ್ ಗಳಾದ ಯು.ಎ.ಇಸ್ಮಾಯೀಲ್, ಅಸ್ಗರಿ ಅಲಿ, ಜಬ್ಬಾರ್ ಮೇಲಂಗಡಿ, ಅಸ್ಗರ್ ಅಲಿ, ಮಾಜಿ  ಕೌನ್ಸಿಲರ್ ಮುಸ್ತಫ ಅಬ್ದುಲ್ಲ ಸಹಿತ 13 ಮೊಹಲ್ಲಾಗಳ ಆಡಳಿತ ಸಮಿತಿಯ ಸದಸ್ಯರು, ಮದ್ರಸ ಅಧ್ಯಾಪಕರು, ಮದ್ರಸ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 

 ಎಸ್.ಎಂ.ಒ. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಂಚಿಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News