ಉಡುಪಿ : ಮಲಬಾರ್ ಗೋಲ್ಡ್ ನಲ್ಲಿ ಮಕ್ಕಳ ದಿನಾಚರಣೆ
ಉಡುಪಿ, ನ.16: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಮಳಿಗೆಯಲ್ಲಿ ಗುರುವಾರ ಆಚರಿಸಲಾದ ಮಕ್ಕಳ ದಿನವನ್ನು ಮಕ್ಕಳು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳು ಚಿತ್ರಕಲೆ, ಹಾಡುಗಾರಿಕೆ, ನೃತ್ಯ, ಜಾದೂಗಾರಿಕೆ, ರಾಂಪ್ ವಾಕ್ ಪ್ರದರ್ಶನವನ್ನು ನೀಡಿದರು. ಗಿರ್ಮಿಟ್ ಚಿತ್ರದ ನಾಯಕ ನಟಿ ಶ್ಲಾಘ ಸಾಲಿಗ್ರಾಮ, ನಾಯಕ ನಟ ಆಶ್ಲೇಷ್ ರಾಜ್, ಗಿನ್ನಿಸ್ ದಾಖಲೆಯ ಯೋಗ ಪಟು ತನುಶ್ರೀ ಪಿತ್ರೋಡಿ, ಕನ್ನಡದ ಕಣ್ಮಣಿ ಕಾರ್ಯಕ್ರಮದ ವಿಜೇತೆ ಸುಶ್ಮಿತ ಜಿ.ಪಿ, ಕನ್ನಡದ ಕೋಗಿಲೆ ಕಾರ್ಯಕ್ರಮದ ವಿಜೇತ ಮಾಸ್ಟರ್ ಲಿಖಿತ್, ಕಿರಿಯ ಜಾದೂಗಾರ ಪ್ರಥಮ್ ಕಾಮತ್, ಕರಾಟೆ ರಾಷ್ಟ್ರೀಯ ಪದಕ ಪುರಸ್ಕೃತೆ ಅಮೃತ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ರಂಗನಿರ್ದೇಶಕ ರವಿರಾಜ್ ಎಚ್.ಪಿ. ಭಾಗವಹಿಸಿದ ಎಲ್ಲ ಮಕ್ಕಳಿಗೆ ಬಹು ಮಾನ ವಿತರಿಸಿದರು. ಈ ಸಂದರ್ಭದಲ್ಲಿ ಶಾಖಾ ವ್ಯವಸ್ಥಾಪಕ ಹಫೀಝ್ ರೆಹಮಾನ್, ಅಲ್ತಾಫ್, ಮಕ್ಕಳ ಪೋಷಕರು, ಗ್ರಾಹಕರು ಉಪಸ್ಥಿತರಿದ್ದರು. ತಾರಾ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.