ಮಂಗಳೂರು: ಬಿಷಪ್‌ರಿಂದ ಸನ್ಮಾನ

Update: 2019-11-16 16:20 GMT

ಮಂಗಳೂರು, ನ.16: ಸರಕಾರದ ಉನ್ನತ ಹುದ್ದೆಗೆ ನೇಮಿಸಲ್ಪಟ್ಟ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾರ್ಪೊರೇಟರ್‌ ಆಗಿ ಚುನಾಯಿತರಾದ ಕ್ರೈಸ್ತ ಸಮುದಾಯದ ನಾಯಕರನ್ನು ಮಂಗಳೂರು ಧರ್ಮಪ್ರಾಂತದಿಂದ ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹ ಸನ್ಮಾನಿಸಿದರು.

ಕೆಪಿಎಸ್ಸಿ ಸದಸ್ಯ ರೊನಾಲ್ಡ್ ಫೆರ್ನಾಂಡಿಸ್, ರಾಜ್ಯ ಸರಕಾರದ ಕ್ರೈಸ್ತ ಅಭಿವೃದ್ಧಿ ಮಂಡಳಿಯ ಚೇರ್‌ಮನ್ ಜೊಯ್ಲಸ್ ಡಿಸೋಜ, ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್‌ಗಳಾದ ಲ್ಯಾನ್ಸ್‌ಲೊಟ್ ಪಿಂಟೊ, ನವೀನ್ ಡಿಸೋಜ, ವಿನಯರಾಜ್ ಎ.ಸಿ., ಜೆಸಿಂತಾ ಆಲ್ಫ್ರೆಡ್ ಅವರನ್ನು ಸನ್ಮಾನಿಸಿದರು.

ಮಂಗಳೂರು ಧರ್ಮಪ್ರಾಂತದ ಪಾಲನಾ ಮಂಡಳಿಯ ಕಾರ್ಯದರ್ಶಿ ಎಂ.ಪಿ. ನೊರೊನ್ಹಾ ಸನ್ಮಾನಿತರಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತದ ಶ್ರೇಷ್ಠ ಗುರುಗಳು, ಚಾನ್ಸಲರ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ವಲಯ ಮುಖ್ಯ ಗುರುಗಳು, ಧರ್ಮ ಗುರುಗಳು, ಧರ್ಮ ಭಗಿನಿಯರು ಹಾಗೂ ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News