ನ.22ರಿಂದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಆರಂಭ

Update: 2019-11-20 11:26 GMT

ಮಂಗಳೂರು : ಯುನಿವೆಫ್ ಕರ್ನಾಟಕ ಇದರ 13ನೇ ವರ್ಷದ “ಅರಿಯಿರಿ ಮನುಕುಲದ ಪ್ರವಾದಿಯನ್ನು” ಎಂಬ ಅಭಿಯಾನವನ್ನು ನ. 22 ರಿಂದ 2020ರ ಜ.24ರ ತನಕ “ಮಾನವ ಸಂಬಂಧಗಳು ಮತ್ತು ಪ್ರವಾದಿ ಮುಹಮ್ಮದ್ (ಸ)” ಎಂಬ ಕೇಂದ್ರೀಯ ವಿಷಯದಲ್ಲಿ ಅಭಿಯಾನ ನಡೆಸಲು ಯುನಿವೆಫ್ ಕರ್ನಾಟಕ ತೀರ್ಮಾನಿಸಿದೆ. 

ಈ ಅಭಿಯಾನವು ನ. 22 ರಂದು ಸಂಜೆ 6.30 ಕ್ಕೆ ಕಂಕನಾಡಿಯ ಜಮೀಯತುಲ್ ಫಲಾಹ್ ಹಾಲ್ ನಲ್ಲಿ ಉದ್ಘಾಟನೆಗೊಳ್ಳಲಿದೆ. ಯುನಿವೆಫ್ ಅಧ್ಯಕ್ಷ ರಫಿಉದ್ದೀನ್ ಕುದ್ರೋಳಿ ಮುಖ್ಯ ಭಾಷಣ ಮಾಡಲಿರುವರು.

ಪ್ರವಾದಿ ಹಝ್ರತ್ ಮುಹಮ್ಮದ್ (ಸ) ರ ಕುರಿತು ಸ್ಪಷ್ಟ ತಿಳುವಳಿಕೆಯನ್ನು ಮೂಡಿಸುವುದು, ಇಸ್ಲಾಮ್ ಹಾಗೂ ಪ್ರವಾದಿಗಳ ಕುರಿತು ಇರುವ ಅಪಕಲ್ಪನೆಯನ್ನು ಸರಿಪಡಿಸುವುದು, ಜನರಿಗೆ ವಿಶ್ವ ಭಾತೃತ್ವದ ಸಂದೇಶವನ್ನು ತಲುಪಿಸುವುದು, ಶಾಂತಿ, ಸೌಹಾರ್ದತೆಯ ಹಾಗೂ ಸಹಬಾಳ್ವೆಯ ನಾಡನ್ನು ಕಟ್ಟುವುದು, ಸುಖೀ ಸಜ್ಜನ ಸಮಾಜವನ್ನು ನಿರ್ಮಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News