'ಎಟಿಎಮ್ ನಲ್ಲಿ ಹಣ ಸಿಕ್ಕಿದೆ: ವಾರಸುದಾರರು ಸಂಪರ್ಕಿಸಿ’

Update: 2019-11-23 07:51 GMT
ಸಾಂದರ್ಭಿಕ ಚಿತ್ರ

ಮಂಗಳೂರು, ನ.23: ಬಂಟ್ವಾಳ ತಾಲೂಕಿನ ನರಿಂಗಾನ ಎಂಬಲ್ಲಿ ಕೆನರಾ ಬ್ಯಾಂಕ್ ಎಟಿಎಮ್ ನಲ್ಲಿ ಹಣದ ಕಂತೆ ಸಿಕ್ಕಿದ್ದು, ವಾರಸುದಾರರು ಸೂಕ್ತ ದಾಖಲೆ ಹಾಜರುಪಡಿಸಿ ಹಣ ಪಡೆದುಕೊಳ್ಳಬಹುದು ಎಂದು ಅನೀಝ್ ಎಂಬವರು ಮಾಹಿತಿ ನೀಡಿದ್ದಾರೆ.

ನರಿಂಗಾನದ ಕೆನರಾ ಬ್ಯಾಂಕ್ ಎಟಿಎಮ್ ನಲ್ಲಿ ಹಣ ತೆಗೆಯಲು ಹೋದಾಗ ಅದಾಗಲೇ ಯಾರೋ ವಿದ್ ಡ್ರಾ ಮಾಡಿದ ಹಣ ಪತ್ತೆಯಾಗಿದ್ದು, ವಾರಸುದಾರರು ಸೂಕ್ತ ದಾಖಲೆ ಹಾಜರುಪಡಿಸಿ ಹಣ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅನೀಝ್ (+918147671784) ಅವರನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News