ಉಳ್ಳಾಲ ಪೇಟೆ: ಬುಸ್ತಾನುಲ್ ಉಲೂಮ್ ಮದರಸ ವಿದ್ಯಾರ್ಥಿಗಳ ಮೀಲಾದುನ್ನಬಿ ಕಾರ್ಯಕ್ರಮ

Update: 2019-11-24 10:57 GMT

ಉಳ್ಳಾಲ : ರಹ್ಮಾನಿಯ ಮಸೀದಿ ಅಧ್ಯಕ್ಷ ಮೊಹಿಯುದ್ದೀನ್ ಹಾಜಿ ಅಧ್ಯಕ್ಷತೆಯಲ್ಲಿ ಬುಸ್ತಾನುಲ್ ಉಲೂಮ್ ಮದರಸ ಇದರ ಆಶ್ರಯದಲ್ಲಿ ಮೀಲಾದುನ್ನಬಿ ಮಕ್ಕಳ ಕಾರ್ಯಕ್ರಮ ನಡೆಯಿತು. ರಹ್ಮಾನಿಯ ಮಸೀದಿಯ ಇಮಾಮ್ ನಿಝಾಮ್ ಸಅದಿ ಮಾಡಾವು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಉಳ್ಳಾಲ ಬುಸ್ತಾನುಲ್ ಉಲೂಮ್ ಯೂತ್ ಅಸೋಸಿಯೇಷನ್ ಇದರ ವತಿಯಿಂದ ಉಳ್ಳಾಲ ರಹ್ಮಾನಿಯ ಮಸೀದಿ ದೀರ್ಘಕಾಲದ ಖಜಾಂಜಿಯಾಗಿ ನಿರ್ವಹಿಸಿದ ಯು.ಬಿ ಯುಸುಫ್ ಅವರಿಗೆ ಸನ್ಮಾನಿಸಲಾಯಿತು ಹಾಗೂ ಸ್ಪರ್ಧೆಯಲ್ಲಿ ಮಕ್ಕಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮುಫತ್ತಿಸ್ ಹನೀಫ್ ಸಖಾಫಿ, ಉಳ್ಳಾಲ ದರ್ಗಾದ ಅಧ್ಯಕ್ಷ ರಶೀದ್ ಹಾಜಿ, ಜೊತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಸದರ್ ಶರೀಫ್ ಮದನಿ, ಸಹ ಅಧ್ಯಾಪಕ ಸುಲೈಮಾನ್ ಉಸ್ತಾದ್, ಮುಹಲ್ಲಿಮ್ ಮನ್ಸೂರ್ ಝುಹರಿ, ಜೊತೆ ಕಾರ್ಯದರ್ಶಿ ಪೊಡಿಮೋನು ಮತ್ತು ಮಸೀದಿ ಆಡಳಿತ ಮಂಡಳಿ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಮುಸ್ತಫ ಅಹ್ಮದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News