ವಾರ್ತಾಭಾರತಿ ಕಚೇರಿಗೆ ಚಂದ್ರಶೇಖರ ಸ್ವಾಮೀಜಿ ಭೇಟಿ
Update: 2019-11-24 14:43 GMT
ಮಂಗಳೂರು : ಖ್ಯಾತ ಧಾರ್ಮಿಕ ಗುರುಗಳಾದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ರವಿವಾರ ಮಂಗಳೂರಿನ 'ವಾರ್ತಾಭಾರತಿ' ಪ್ರಧಾನ ಕಚೇರಿಗೆ ಭೇಟಿ ನೀಡಿದರು.
ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆಯವರನ್ನು ಭೇಟಿಯಾದ ಸ್ವಾಮೀಜಿ ಪತ್ರಿಕೆಯ ಜನಪರ ಧೋರಣೆಯನ್ನು ಶ್ಲಾಘಿಸಿ, ಅಭಿನಂದಿಸಿದರು.
ಪತ್ರಿಕೆಯ ವತಿಯಿಂದ ಮಂಗಳೂರು ಬ್ಯುರೋ ಚೀಫ್ ಪುಷ್ಪರಾಜ್ ಬಿ ಎನ್ ಅವರು ಸ್ವಾಮೀಜಿಗೆ ಸ್ಮರಣಿಕೆ ನೀಡಿ ಗೌರವಿಸಿದರು.