​ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ

Update: 2019-11-26 16:50 GMT

ಉಡುಪಿ, ನ. 26: ಆಧಾರ್ ಕಾರ್ಡಿನಲ್ಲಿರುವ ಹೆಸರು, ಜನ್ಮದಿನಾಂಕ, ವಿಳಾಸಗಳ ಬದಲಾವಣೆ ಅಥವಾ ತಿದ್ದುಪಡಿ ಮಾಡುವ ಸಲುವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಉಡುಪಿ ಜಿಲ್ಲೆಯ ಬ್ಯಾಂಕ್ ಶಾಖೆಗಳು ಹಾಗೂ ಅಂಚೆ ಕಚೇರಿಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳನ್ನು ತೆರೆಯಲಾಗಿದೆ.

ಈ ಕೇಂದ್ರಗಳಲ್ಲಿ ಆಧಾರ್ ಕಾರ್ಡ್‌ಗಳನ್ನು ನೋಂದಣಿ ಮಾಡಲು ವ್ಯವಸ್ಥೆಯೊಂದಿಗೆ ತಿದ್ದುಪಡಿ ಕೆಲಸಗಳು ನಡೆಯಲಿವೆ. ಈ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅಪರೇಟರ್‌ಗಳು ಅಂಚೆ ಇಲಾಖೆಯ ಕೆಲಸದೊಂದಿಗೆ ಪ್ರತಿದಿನ 20ರಿಂದ 30 ಜನರ ನೋಂದಣಿ ತಿದ್ದುಪಡಿ ನಡೆಸಲಾಗುತ್ತದೆ.

ಅಲ್ಲದೇ ಜಿಲ್ಲೆಯ ಕುಂದಾಪುರ, ಕಾರ್ಕಳ, ಉಡುಪಿ, ಬ್ರಹ್ಮಾವರ, ಬೈಂದೂರು, ಕಾಪು ತಾಲೂಕು ಕಚೇರಿಗಳು, ನಾಡ ಕಚೇರಿಗಳಾದ ಕೋಟ, ವಂಡ್ಸೆ, ಅಜೆಕಾರು ಇಲ್ಲಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಹಾಗೂ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸ್ಪಂದನ ಕೇಂದ್ರಗಳಲ್ಲಿ ಸಾರ್ವಜನಿಕರು ಹೊಸದಾಗಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗಳನ್ನು ಕಚೇರಿಯ ಅವಧಿಯಲ್ಲಿ ಮಾಡಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಧಾರ್ ತಿದ್ದುಪಡಿಗೆ ಅವಕಾಶವಿರುವ ಬ್ಯಾಂಕ್ ಶಾಖೆಗಳು:  ಉಡುಪಿ ಮಾರುತಿ ವಿಥಿಕಾದ ಇಂಡಿಯನ್ ಬ್ಯಾಂಕ್, ಹೆಬ್ರಿಯ ಫೆಡರಲ್ ಬ್ಯಾಂಕ್, ಉಡುಪಿ ಕುಂಜಿಬೆಟ್ಟಿನ ಕರ್ನಾಟಕ ಬ್ಯಾಂಕ್, ಕಾರ್ಕಳದ ಕೆವಿಜಿ ಬ್ಯಾಂಕ್, ಕುಂದಾಪುರದ ಕೆನರಾ ಬ್ಯಾಂಕ್, ಬ್ರಹ್ಮಾವರದ ವಿಜಯಾ ಬ್ಯಾಂಕ್, ಉಡುಪಿ ಕೋರ್ಟ್ ರೋಡ್‌ನ ಎಚ್‌ಡಿಎಫ್‌ಸಿ ಬ್ಯಾಂಕ್, ಕಾರ್ಕಳ ಬಸ್‌ನಿಲ್ದಾಣದ ವಿಜಯಾ ಬ್ಯಾಂಕ್, ಕಾರ್ಕಳದ ಕೆನರಾ ಬ್ಯಾಂಕ್, ಉಡುಪಿಯ ಕೆನರಾ ಬ್ಯಾಂಕ್, ಮಜೂರು ಕಾಪುವಿನ ಕೆನರಾ ಬ್ಯಾಂಕ್, ಕುಂದಾಪುರ ಹೆಮ್ಮಾಡಿಯ ಕೆವಿಜಿ ಬ್ಯಾಂಕ್, ಉಡುಪಿ ಬನ್ನಂಜೆಯ ವಿಜಯಾ ಬ್ಯಾಂಕ್ ಶಾಖೆ.

ಜಿಲ್ಲೆಯ ಅಂಚೆ ಕಚೇರಿಗಳು: ನಿಟ್ಟೆ, ಕಾರ್ಕಳ ಗಾಂಧಿಮೈದಾನ ರೋಡ್, ಕಾಪು ಸಬ್‌ಪೋಸ್ಟ್ ಆಫೀಸ್, ಕುಂದಾಪುರ ಗಾಂಧಿ ಮೈದಾನ, ಮಣಿಪಾಲ ಪ್ರಧಾನ ಅಂಚೆಕಚೇರಿ, ಉಡುಪಿ ಹೆಡ್‌ಪೋಸ್ಟ್ ಆಫೀಸ್, ಕಾರ್ಕಳ ಬೈಲೂರು, ಕೋಟ ಉಪಅಂಚೆ ಕಚೇರಿ, ಅಜೆಕಾರು, ಪಡುಬಿದ್ರಿ, ಕಾರ್ಕಳ ಬಝಾರ್ ಅಂಚೆಕಚೇರಿ, ಬೆಳ್ಮಣ್, ಉಡುಪಿ ಕುಂಜಿಬೆಟ್ಟು, ಸಾಲಿಗ್ರಾಮ, ಹೆಬ್ರಿ, ವಂಡ್ಸೆ, ತಲ್ಲೂರು, ಪಡುಬಿದ್ರಿ ಉಪಕಚೇರಿ, ಪೆರ್ಡೂರು, ಪರ್ಕಳ, ಪೀಲಾರು, ಕೊಕ್ಕರ್ಣೆ, ಬಾರಕೂರು, ಹಿರಿಯಡ್ಕ, ಶಂಕರನಾರಾಯಣ.
 ಸಾಸ್ತಾನ, ಗಂಗೊಳ್ಳಿ, ಬ್ರಹ್ಮಾವರ, ಮುಂಡ್ಕೂರು, ಉದ್ಯಾವರ, ಮಲ್ಪೆ, ಉಡುಪಿ ಕ್ರೋಡಾಶ್ರಮ, ಮಲ್ಪೆ, ಉದ್ಯಾವರ, ಬಾರಕೂರು, ಕುಂದಾಪುರ ಶಾಸ್ತ್ರಿ ಸರ್ಕಲ್, ಬಸರೂರು, ಶಿರ್ವ ಉಪಕಚೇರಿ, ಸಿದ್ಧಾಪುರ, ಸಾಸ್ತಾನ ಉಪಕಚೇರಿ, ಕೋಟೇಶ್ವರ, ಉಡುಪಿ ಅಂಬಲಪಾಡಿ ಉಪಕಚೇರಿ, ಕೆಮ್ಮಣ್ಣು, ಹೆಜ್ಮಾಡಿ, ಮೂಡುಬೆಳ್ಳೆ ಉಪಕಚೇರಿ, ತಲ್ಲೂರು, ಕುಂದಾಪುರ ಹೆಡ್‌ಪೋಸ್ಟ್ ಆಪೀಸ್, ಶಂಕರಪುರ, ಕೊಲ್ಲೂರು, ತ್ರಾಸಿ, ಕಲ್ಯಾಣಪುರ, ಕುಕ್ಕುಂದೂರು, ಶಿರೂರು ಕೆಳಪೇಟೆ, ಶಿರೂರು ಉಪಕಚೇರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News